ದಾವಣಗೆರೆ : ಸಿದ್ದು ಸರ್ಕಾರ ಎಲ್ಲಾ ರಂಗದಲ್ಲೂ ಬಹಳ ಹಿಂದೆ ಬಿದ್ದಿದ್ದೆ, ತನ್ನ ತಪ್ಪುಗಳಿಂದ ಸಂಕಷ್ಟಕ್ಕಿಡಾಗುವುದರ ಜೊತೆಗೆ ಜನರ ಮುಂದೆ ಮುಜುಗರಕ್ಕೀಡಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ, ಚುನಾವಣೆ ಮುಂಚೆ 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರಿ ಖಾಲಿ ಇತ್ತು, ಚುನಾವಣೆ ವೇಳೆ ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಹುದ್ಧೆ ಭರ್ತಿ ಭರವಸೆ ನೀಡಿದ್ದರು. ಆದರೆ ಮೂರು ವರ್ಷ ಕಳೆದರೂ ಸಿದ್ದು ಕೈನಲ್ಲಿ ಹುದ್ದೆ ಭರ್ತಿ ಮಾಡಲು ಆಗಿಲ್ಲ. ಹೆಚ್ಚು ಅವಧಿ ಸಿಎಂ ಎನ್ನುವ ಖ್ಯಾತಿ ಮೇಲೆ ನಿರ್ಗಮನ ಮಾಡುವ ವಿಚಾರದಲ್ಲಿ ಸಿದ್ದು ಇದ್ದಾರೆ. ಐದು ವರ್ಷ ಗ್ಯಾರಂಟಿ ಹೆಸರಿನಲ್ಲಿ ಕಾಲಕಳೆದು ನಿರ್ಗಮಿಸುವ ಯತ್ನ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಕಾಲೇಳೆದಿದ್ದಾರೆ.
ಸಿದ್ದು ಯತ್ನವನ್ನು ಉದ್ಯೋಗ ಆಕಾಂಕ್ಷಿಗಳು ಒಪ್ಪಲಿಲ್ಲ, ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಬೀದಿಗೆ ಇಳಿದು ಪ್ರತಿಭಟನೆ ಮಾಡಿದ್ದರು. ನಾವು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆವು. ಇದೀಗಾ ಎಚ್ಚೆತ್ತ ಸಿದ್ದು 56 ಸಾವಿರ ಹುದ್ದೆ ತುಂಬಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಆದ್ರೆ ಒಳಮೀಸಲಾತಿ ಅಡ್ಡತಂದು ಜಾಣತನ ಪ್ರದರ್ಶನ ಮಾಡುತ್ತಿದ್ದಾರೆ. ಇತ್ತ ಒಳಮೀಸಲಾತಿ ಆಗಬಾರದು, ಅತ್ತ ಹುದ್ದೆ ಭರ್ತಿ ಪ್ರಕ್ರಿಯೆ ನಡೆಯಬಾರದು ಆ ನಿಟ್ಟಿನಲ್ಲಿ ಯೋಜನೆ ಮಾಡುತ್ತಿದ್ದಾರೆ. ಎಂದು ಕಿಡಿಕಾರಿದ್ದಾರೆ. ಹುದ್ದೆ ಪ್ರಕ್ರಿಯೆ ಅಂತಿಮ ಹಂತದವರೆಗೂ ಜಿಲ್ಲಾವಾರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು, ಸರ್ಕಾರದ ಗ್ಯಾರಂಟಿಗಳಾದ ಯುವನಿಧಿಗೆ ಹಣ ನೀಡ್ತಾ ಇಲ್ಲ, ಗೃಹ ಲಕ್ಷ್ಮಿ ಹಣ ಕೊಡ್ತಾ ಇಲ್ಲ. ಕೇಳಿದ್ರೆ ಅದೇನು ಸಂಬಳವೆ ಅಂತಾರೆ.ಪ್ರ ತಿತಿಂಗಳು ಹಾಕ್ತಾ ಇದೆವಿ ಅಂತಾರೆ, ನಾವು ಅವರ ಹುಳುಕು ಹೊರತೆಗೆದೆವು ಎಂದಿದ್ದಾರೆ. ಅಕೌಂಟ್ ಕೊಡೋಕೆ ಇವತ್ತು ರೆಡಿ ಇಲ್ಲ, ಬೇರೆ ಯಾವುದೋ ಲಕ್ಷ್ಮೀಗೆ ಹೋಯಿತಾ? ಎಂದು ಪರೋಕ್ಷವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಛಲವಾದಿ ನಾರಾಯಣಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಬದ್ದತೆ ಇಲ್ಲದ ಗ್ಯಾರಂಟಿಗಳು, ದಲಿತರಿಗೆ ಏನು ಕೊಟ್ಟಿದೆ. 39 ಸಾವಿರ ಕೋಟಿ ಲೂಟಿ ಮಾಡಿ ಅದನ್ನು ಗ್ಯಾರಂಟಿ ರೂಪದಲ್ಲಿ ದಲಿತರಿಗೆ ಕೊಟ್ಟಿದ್ದಾರೆ. ಇದರಲ್ಲಿ ಏನು ಗ್ಯಾರಂಟಿ ಕೊಟ್ಟಂತಾಗುತ್ತದೆ ಎಂದು ವಾಗ್ಧಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಕೆರೆಯಲ್ಲಿ ವ್ಯಕ್ತಿಯ ಶ*ವ ಪತ್ತೆ | ಹಣಕಾಸು ವಿಚಾರಕ್ಕೆ ಸ್ನೇಹಿತರೇ ಹತ್ಯೆ ಮಾಡಿರೋ ಶಂಕೆ!



















