ಶಿವಮೊಗ್ಗ : ರಾಜ್ಯ ಸರ್ಕಾರ ಅಧೋಗತಿಗೆ ಹೋಗಿದೆ. ಈಗ ಎಲ್ಲರೂ ಸಿಎಂ ಆಕಾಂಕ್ಷಿಗಳಾಗಿದ್ದಾರೆ. ಗೃಹ ಸಚಿವ ಪರಮೇಶ್ವರ್ ಕೂಡಾ ಸಿಎಂ ರೇಸ್ ನಲ್ಲಿ ಇದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ, ದಲಿತ ಸಿಎಂ ಆಗಬೇಕು ಎನ್ನುವ ಕೂಗು ಕೇಳುತ್ತಿದೆ. ಇತ್ತ ಡಿಕಿಶಿ ಸಿಎಂ ಆಗಬೇಕು ಎನ್ನುವ ಪ್ರಯತ್ನ ಮುಂದುವರೆದಿದೆ. ಇನ್ನೂ ಶಾಸಕರು ಮಂತ್ರಿ ಸ್ಥಾನಕ್ಕೆ ಪತ್ರ ಬರೆಯುತ್ತಿದ್ದಾರೆ. ಮಂತ್ರಿ ಮತ್ತು ಸಿಎಂ ಸ್ಥಾನಕ್ಕೆ ಹೋರಾಟ ಜೋರಾಗಿದೆ. ಕಾಂಗ್ರೆಸ್ ಪಕ್ಷ ಸತ್ತು ಹೋಗಿದೆಯೇ ಹೈಕಮಾಂಡ್ ಏನು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಪೂರ್ಣ ಬಹುಮತ ಕೊಟ್ಟರು ಆಡಳಿತ ವಿಫಲವಾಗಿದೆ. ಜನರು ಸರ್ಕಾರದ ಧೋರಣೆಗೆ ಬೇಸತ್ತು ಹೋಗಿದ್ದಾರೆ. ಡಿಸಿಎಂ ಮತ್ತು ಸಿಎಂ ಇಬ್ಬರೂ ಸೇರಿ ವಿಧಾನ ಸಭೆ ಮುಂದೆ ಧರಣಿ ಮಾಡಿ ಈ ಮೂಲಕ ಎಲ್ಲ ಗೊಂದಲ ನಿವಾರಣೆ ಮಾಡಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರ ಹೇಳಿಕೆಗೆ ಕವಡೆ ಕಾಸಿಗೆ ಬೆಲೆ ಇಲ್ಲದಂತಾಗಿದೆ. 7 ಕೋಟಿ ಜನರ ಪರವಾಗಿ ಇಬ್ಬರು ಧರಣಿ ಕುಳಿತುಕೊಳ್ಳಿ. ಇದರ ಮೂಲಕ ಕೇಂದ್ರ ವರಿಷ್ಠರ ಗಮನ ಸೆಳೆಯಬೇಕು. ರಾಜ್ಯ ಸರ್ಕಾರ ನಿಷ್ಕ್ರಿಯಗೊಂಡಿದೆ. ಇದರಿಂದ ರಾಷ್ಟ್ರ ದ್ರೋಹಿ ಚಟುವಟಿಕೆ ಹೆಚ್ಚಾಗಿವೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕೊಲೆ, ಗಲಭೆಗಳೇ ಹೆಚ್ಚಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮುಸ್ಲಿಂರಿಗೆ ಸರಕಾರದ ಬೆಂಬಲ ಹೆಚ್ಚಾಗಿದೆ. ಇನ್ನೂ ರಾಜ್ಯದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ನಡ್ರಗ್ ಮಾಫಿಯಾ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಬೀಡಾ ಅಂಗಡಿಯಲ್ಲಿ ಡ್ರಗ್ಸ್ ಗಾಂಜಾ ಸಿಗುತ್ತಿದೆಮೊದಲು ಸಿಎಂ ಯಾರು ಎನ್ನುವುದು ತೀರ್ಮಾನ ಮಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಕೇಸ್ | ಓರ್ವ ನಟಿ ಸೇರಿ 11 ಆರೋಪಿಗಳ ಬಂಧನ



















