ಬೆಂಗಳೂರು : ರೈಲ್ವೆ ಇಲಾಖೆಯು ರೈಲು ಪ್ರಯಾಣಿಕರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರಲ್ಲೂ, ಯಾವ ರೈಲ್ವೆ ಸ್ಟೇಷನ್ ನಿಂದ ಟಿಕೆಟ್ ಬುಕ್ ಮಾಡಲಾಗಿರುತ್ತದೆಯೋ, ಅದೇ ರೈಲು ನಿಲ್ದಾಣದಿಂದ ಪ್ರಯಾಣಿಕರು ರೈಲು ಹತ್ತಬೇಕು ಎಂಬ ಕಠಿಣ ನಿಯಮವನ್ನು ರೈಲ್ವೆ ಇಲಾಖೆಯು ಜಾರಿಗೆ ತಂದಿದೆ.
ಟಿಕೆಟ್ ಬುಕ್ ಮಾಡಿದಾಗ ಆ ಟಿಕೆಟ್ ನಲ್ಲಿ ನಮೂದಿಸಲಾದ ರೈಲು ನಿಲ್ದಾಣದಿಂದಲೇ ಪ್ರಯಾಣಿಕರು ರೈಲು ಹತ್ತಬೇಕು. ಹಾಗೊಂದು ವೇಳೆ, ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ ರೈಲು ನಿಲ್ದಾಣದ ಬದಲು ಬೇರೆ ರೈಲು ನಿಲ್ದಾಣದಿಂದ ಹತ್ತಿದರೆ, ಅವರ ಟಿಕೆಟ್ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆಯು ಮಾಹಿತಿ ನೀಡಿದೆ.
ನಿಗದಿತ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ಹತ್ತದೆ, ಮುಂದಿನ ನಿಲ್ದಾಣದಲ್ಲಿ ಹತ್ತಲು ಪ್ರಯತ್ನಿಸಬಾರದು. ಹಾಗೊಂದು ವೇಳೆ, ನಿಗದಿತ ರೈಲು ನಿಲ್ದಾಣದಿಂದ ಹೊರಟ ರೈಲಿನಲ್ಲಿ ಪ್ರಯಾಣಿಕರು ಹತ್ತದೆ ಇರುವುದನ್ನು ಟಿಕೆಟ್ ಪರಿಶೀಲನೆ ಮಾಡುವವರು (ಟಿಟಿಇ) ಗಮನಿಸಿದರೆ, ತಕ್ಷಣವೇ ಅವರು ಬೇರೆಯವರಿಗೆ ಆ ಸೀಟ್ ಅನ್ನು ಬೇರೆಯವರಿಗೆ ನೀಡಬಹುದಾಗಿದೆ.
ರೈಲು ಸಂಚಾರವು ಇನ್ನಷ್ಟು ಪಾರದರ್ಶಕವಾಗಿರಬೇಕು ಎಂಬ ಕಾರಣದಿಂದಾಗಿ ರೈಲ್ವೆ ಇಲಾಖೆಯು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕೆಲ ತಿಂಗಳ ಹಿಂದಷ್ಟೇ, ರೈಲು ಟಿಕೆಟ್ ಬುಕ್ ಮಾಡಲು ಆಧಾರ್ ಕಡ್ಡಾಯಗೊಳಿಸಿದೆ. ಏಜೆಂಟರು ಟಿಕೆಟ್ ಖರೀದಿಸಿ, ಕಾಳಸಂತೆಯಲ್ಲಿ ಅವುಗಳನ್ನು ಮಾರಾಟ ಮಾಡುವುದನ್ನು ತಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ.
ಇದನ್ನೂ ಓದಿ : ಚುನಾವಣಾ ಉಸ್ತುವಾರಿಯಾಗಿ ಡಿಕೆಶಿ ನಾಳೆ ಅಸ್ಸಾಂಗೆ ಭೇಟಿ



















