ಬೆಂಗಳೂರು : ನರೇಗಾ ವಿಚಾರವಾಗಿ ಸರ್ಕಾರ ವಿಶೇಷ ಅಧಿವೇಶನ ಮಾಡಿ, ಚರ್ಚೆ ಮಾಡಲಿ ನಾವು ಸಿದ್ಧ ಅಂತ ಸರ್ಕಾರಕ್ಕೆ ಮಾಜಿ ಸಚಿವ ಸಿ.ಟಿ.ರವಿ ಸವಾಲ್ ಹಾಕಿದ್ದಾರೆ.
ನರೇಗಾ ವಿಚಾರವಾಗಿ ಬುಧವಾರ (ಜ.13) ವಿಶೇಷ ಕ್ಯಾಬಿನೆಟ್ ಸಭೆ ನಡೆಸ್ತಿರೋ ಸರ್ಕಾರದ ನಡೆಗೆ ಪ್ರತಿಕ್ರಿಯೆ ನೀಡಿದ ಅವರು, ವಿಶೇಷ ಕ್ಯಾಬಿನೆಟ್ ಕರೆಯಲಿ. ಈಗಾಗಲೇ ವಿಜಯೇಂದ್ರ, ಅಶೋಕ್ ಮತ್ತು ಕುಮಾರಸ್ವಾಮಿ ಅವರು ಇದರಿಂದ ರಾಜ್ಯದ ಹಿತಾಸಕ್ತಿಗೆ ಏನು ಧಕ್ಕೆ ಆಗಿದೆ ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮೊದಲು ಸಿದ್ಧರಾಮಯ್ಯ ಉತ್ತರ ಕೊಡ್ಲಿ. ಬೇಕಾದರೆ ಸಾರ್ವಜನಿಕವಾಗಿ ಕೂಡ ಚರ್ಚೆ ಮಾಡೋಣ. ಬೇಕಾದರೆ ವಿಶೇಷ ಅಧಿವೇಶನದಲ್ಲೇನೇ ಒಂದು ದಿನ ಚರ್ಚೆ ಮಾಡೋಣ ಎಂದಿದ್ದಾರೆ.
ಎಷ್ಟು ನಕಲಿ ಆಧಾರ್ ಕಾರ್ಡ್ಗಳು ಪತ್ತೆಯಾಗಿದೆ? ಲಾಭ ಏನು? ನಷ್ಟ ಏನು? ಬೇಕಾದರೆ ಚರ್ಚೆ ಮಾಡೋಣ. ಮನ್ರೇಗಾ ಲಾಭ ಜನರಿಗೆ ಎಷ್ಟಾಗಿದೆ? ಗುತ್ತಿಗೆದಾರರಿಗೆ ಎಷ್ಟು ಲಾಭ ಆಗಿದೆ ಎಂದು ಚರ್ಚೆ ಮಾಡೋಣ. ಎಷ್ಟು ಭ್ರಷ್ಟಾಚಾರದ ಪ್ರಕರಣ ದಾಖಲಾಗಿದೆ? ರಾಮನ ಹೆಸರಿನ ಬಗ್ಗೆ ಕಾಂಗ್ರೆಸ್ಗೆ ಯಾಕೆ ದ್ವೇಷ? ಚರ್ಚೆ ಆಗಲಿ. ಗಾಂಧಿ ತನ್ನ ರಾಮನ ವ್ಯಕ್ತಿತ್ವದ ಮೂಲಕ ಪ್ರೇರಣೆ ಪಡೆದು ರಾಮರಾಜ್ಯ ನಿರ್ಮಾಣ ಆಗಬೇಕು ಅಂತ ಹೇಳಿದ್ರು. ರಾಮರಾಜ್ಯ ಆಗಬೇಕು ಅಂತ ಗಾಂಧೀಜಿಯವರು ಪ್ರೇರೇಪಿಸಿದರು. ಮಧ್ಯರಾತ್ರಯಲ್ಲೂ ಮಹಿಳೆಯರು ನಿರ್ಭಿತಿಯಿಂದ ಓಡಾಡಬೇಕು ಅಂತ ಗಾಂಧೀಜಿಯವರು ಹೇಳಿದ್ರು. ನೀವು ಹೇಳಿರುವ ರೀತಿಯಲ್ಲಿ ಮಹಿಳೆಯರು ಕುಡಿದು ತೂರಾಡಿ ಓಡಾಡಬೇಕು ಅಂತ ಹೇಳಿರಲಿಲ್ಲ .ನೀವು ಕುಡಿದವರಿಗೆ ಓಡಾಡಿ ಬಿದ್ದವರಿಗೆ ಮನೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡ್ತೀವಿ ಅಂತ ಹೇಳಿದ್ರಿ. ಇದು ಗಾಂಧಿ ರಾಮರಾಜ್ಯ ಅಲ್ಲ ಎಂದು ಕಿಡಿಕಾರಿದ್ದಾರೆ.
ಜಿ ರಾಮ್ ಜಿ ಬಿಲ್ನಲ್ಲಿ ಗೋಡ್ಸೆ ರಾಮ ಇದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟ ಸಿಟಿ ರವಿ ಅವರು, ಸಿದ್ದರಾಮನವರಲ್ಲೂ ರಾಮ ಇದ್ದಾನೆ. ಅವರವರ ಭಾವಕ್ಕೆ, ಅವರವರ ಭಕುತಿಗೆ ಅವರವರ ತರನಾಗಿ ಇರುತಿರನು ಶಿವಯೋಗಿ. ಸಿದ್ದರಾಮಯ್ಯ ಅವರು ಯಾವ ದೃಷ್ಟಿಯಿಂದ ನೋಡ್ತಿದ್ದಾರೆ ಗೊತ್ತಿಲ್ಲ? ಅವ್ರು ಗೋಡ್ಸೆಯಲ್ಲೇ ರಾಮನನ್ನ ಕಾಣ್ತಿರಬಹುದು. ಇವರು ಯಾವ ರಾಮನನ್ನು ಕಾಣುತ್ತಿದ್ದರು ಗೊತ್ತಿಲ್ಲ. ಇವರಿಗೆ ಇವರ ತರನಾಗಿಯೇ ರಾಮ ಕಾಣುತ್ತಿರಬಹುದು ಎಂದು ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ : ಕೋಗಿಲು ಲೇಔಟ್ ರೀತಿಯಲ್ಲೇ ಉಡುಪಿಯಲ್ಲೂ ಮನೆ, ಶೆಡ್ಗಳು ನೆಲಸಮ | ಸಾರ್ವಜನಿಕರಿಂದ ಬೃಹತ್ ಪ್ರತಿಭಟನೆ



















