ಶಿವಮೊಗ್ಗ: ಪೊಲೀಸ್ ಠಾಣೆ ಎದುರೇ ವ್ಯಕ್ತಿಯೋರ್ವ ಮರವೇರಿ ಕುಳಿತು ರಂಪಾಟ ಮಾಡಿರುವ ಘಟನೆ ನಡೆದಿದೆ.
ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಕೋಟೆ ಪೊಲೀಸ್ ಠಾಣೆಯ ಆವರಣದಲ್ಲಿರುವ ಅರಳಿ ಮರವೇರಿ ಕುಳಿತಿದ್ದ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿ ಠಾಣೆಗೆ ಹಸ್ತಾಂತರಿಸಿದ್ದಾರೆ.
ಬೆಳ್ಳಂಬೆಳಗ್ಗೆ ಆತ ಠಾಣೆಯ ಆವರಣದಲ್ಲಿದ್ದ ಅರಳಿಮರವನ್ನೇರಿ ಆತಂಕ ಸೃಷ್ಟಿಸಿದ್ದ. ಮರ ಹತ್ತಿ ಕುಳಿತವನನ್ನು ಇಬ್ರಾಹಿಂ ಎಂದು ಗುರುತಿಸಲಾಗಿದೆ. ಆತನನ್ನು ಮನವಲಿಸಿ ಅಗ್ನಿಶಾಮಕ ಕೆಳಗಿಳಿಸಿದ ಅಗ್ನಿಶಾಮಕ ಸಿಬ್ಬಂದಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಬೆಳಿಗ್ಗಿನ ಜಾವ ಎರಡು ಗಂಟೆಯ ಆಸುಪಾಸಿನಲ್ಲಿ ಮರ ಹತ್ತಿ ಕೆಳೆಗೆ ಇಳಿಯಲು ನಿರಾಕರಿಸಿದ್ದ ಎನ್ನಲಾಗಿದೆ. ಕೋಟೆ ಪೊಲೀಸರು ಆತನ ಮನವೊಲಿಸಿ ಕೆಳಗಿಳಿಸಲು ಯತ್ನಿಸಿದ್ದಾರೆ. ಸಾಧ್ಯವಾಗದ ಹಿನ್ನಲೆಯಲ್ಲಿ ಮೊದಲಿಗೆ ಮಸೀದಿಯ ಮುಖ್ಯಸ್ಥರನ್ನು ಕರೆಯಿಸಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದಕ್ಕೂ ಒಪ್ಪದ ವ್ಯಕ್ತಿ ನನಗೆ ಜೈಲಿಗೆ ಹಾಕಿ ಕೆಳಗೆ ಇಳಿಸಬೇಡಿ. ನಾನು ಕೆಳಗೆ ಬಂದರೆ ಕೊಲೆ ಮಾಡುತ್ತಾರೆ ಎಂದು ಹೇಳಿ ರಂಪಾಟ ಮಾಡಿದ್ದಾನೆ. ಆನಂತರ ಈ ವಿಷಯವನ್ನು ಎಸ್ಪಿ ಮತ್ತು ಡಿಸಿಗೆ ತಿಳಿಸಲಾಗಿದೆ. ನಿನ್ನನ್ನು ಜೈಲಿಗೆ ಹಾಕುತ್ತಾರೆ. ನೀನು ಇಳಿದು ಬಾ ಎಂದು ಮನವೊಲಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಠಾಣೆಗೆ ಹಸ್ತಾಂತರಿಸಿದ್ದಾರೆ.



















