ಬೆಂಗಳೂರು: ಇಂದು ವಿಶ್ವ ಯೋಗ ದಿನಾಚರಣೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಚಾಲನೆ ನೀಡಿ ಮಾತನಾಡಿದರು. ಇಂದು 11 ನೇ ಅಂತಾರಾಷ್ಟ್ರೀಯ ಯೋಗ ದಿನ. ನಮ್ಮ ಯೋಗಕ್ಕೆ 6 ಸಾವಿರ ವರ್ಷದ ಇತಿಹಾಸವಿದೆ. ಈ ಯೋಗದ ಮಹತ್ವವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಾರಿರುವ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ವಿಶ್ವ ಸಂಸ್ಥೆ ಕೂಡ ಇದಕ್ಕೆ ಮಾನ್ಯತೆ ನೀಡಿದೆ. ಯೋಗ ಅಂದರೆ ದೈಹಿಕ ಮಾತ್ರವಲ್ಲ. ಮಾನಸಿಕವಾಗಿ ಶಕ್ತಿ ಕೊಡುತ್ತದೆ. ಯೋಗ ದಿನಾಚರಣೆ ಇವತ್ತಿಗೆ ಮಾತ್ರ ಸಿಮೀತವಾಗಬಾರದು. ನಮ್ಮ ದಿನನಿತ್ಯದ ಪದ್ಧತಿ ಆಗಬೇಕು. ನಾವು ಮತ್ತು ನಮ್ಮ ಕುಟುಂಬ ಯೋಗ ಮಾಡಲೇಬೇಕು. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾ ಪ್ರವಾಸ ಮುಗಿಸಿ, ವಿಶಾಖಪಟ್ಟಣಂನಲ್ಲಿ ಭಾಗಿಯಾಗಿದ್ದಾರೆ ಎಂದಿದ್ದಾರೆ.
ಡಾ. ಸಿ.ಎನ್. ಅಶ್ವಥ್ ನಾರಾಯಣ್, ಎಲ್ಲರಿಗೂ ಯೋಗ ದಿನದ ಶುಭಾಶಯಗಳು. ಯೋಗದ ಅನುಕೂಲತೆಯನ್ನು ನೀವು ಅರಿತಿದ್ದೀರಿ. ಇಂದು ಒತ್ತಡದ, ವೈಮನಸ್ಸಿನ ಪರಿಸ್ಥಿತಿ ಇದೆ. ಅದನ್ನು ಸರಿಯಾಗಿಟ್ಟುಕೊಳ್ಳಬೇಕು ಅಂದರೆ ನಾವು ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳಬೇಕು. ಈಗ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮಾಡಬೇಕು ಎಂದಿದ್ದಾರೆ.
ಈ ವೇಳೆ ನಟಿ ಸುಧಾರಾಣಿ ಮಾತನಾಡಿ, ಯೋಗದ ಬಗ್ಗೆ ಹಾಗೂ ಅದರ ಉಪಯೋಗದ ಬಗ್ಗೆ ಎಲ್ಲರಿಗೂ ಗೊತ್ತಿದೆ. ನನಗೆ ಇಲ್ಲಿ ಭಾಗವಹಿಸುತ್ತಿರುವುದಕ್ಕೆ ಬಹಳ ಸಂತೋಷ ಇದೆ. ನಿಮ್ಮ ಜೊತೆಗೆ ನಾನು ಯೋಗ ಮಾಡುತ್ತಿರುವುದು ಖುಷಿ ತಂದಿದೆ. ನಾನು ನಾಲ್ಕೈದು ವರ್ಷದವಳಿದ್ದಾಗಲೇ ಯೋಗ ಶುರು ಮಾಡಿದೆ. ನಮ್ಮ ಶೂಟಿಂಗ್ ಟೆನ್ಷನ್ ನಲ್ಲೂ ಯೋಗ ಮಾಡುತ್ತಿದ್ದೆ.
ಪ್ರಾಣಾಯಾಮ, ಸೂರ್ಯ ನಮಸ್ಕಾರ ನನಗೆ ಬಹಳ ಉಪಯೋಗ ಆಗಿದೆ. ಇದನ್ನು ನಾವು ಅಭ್ಯಾಸ ಮಾಡುವುದರ ಜೊತೆಗೆ ಬೇರೆಯವರಿಗೂ ತಿಳಿಸಬೇಕು ಎಂದಿದ್ದಾರೆ.
ಟ್ರೆಸ್ ಲೈಫ್ ನಲ್ಲಿ ಯೋಗ ಮಾಡಲೇಬೇಕು. ಇದನ್ನು ಪ್ರತಿನಿತ್ಯ ನಾವು ಮಾಡಲೇಬೇಕು ಎಂದಿದ್ದಾರೆ. ಈ ವೇಳೆ ಬಿ.ವೈ. ವಿಜಯೇಂದ್ರ, ನಟ ಕೋಮಲ್ ಕುಮಾರ್, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಭಾಗಿಯಾಗಿದ್ದರು.