ಬೆಂಗಳೂರು: ಹಿಂದುಳಿದ ಕಲ್ಯಾಣ ಇಲಾಖೆಯಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಜಾತಿಗಣತಿ ವರದಿ ಸರಿಯಾಗಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ನಿನ್ನೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ ಡಿಸಿಎಂ ಡಿಕೆಶಿ, ಒಕ್ಕಲಿಗರಲ್ಲಿ ಬಡವರು ಇಲ್ವಾ? ಲಿಂಗಾಯತರಲ್ಲಿ ಬಡವರು ಇಲ್ವಾ? ಎಲ್ಲರೂ ಕೂಡ ಶ್ರೀಮಂತರಾಗಿದ್ದಾರಾ? ಎಂದು ಪ್ರಶ್ನಿಸುವ ಮೂಲಕ ಜಾತಿಗಣತಿ ವಿಚಾರದಲ್ಲಿ ಈ ವರದಿ ಸರಿಯಿಲ್ಲ ಎಂದಿದ್ದಾರೆ.