ಮೈಸೂರು: ನಾಯಕ ಜನಾಂಗಕ್ಕೆ ಸೇರಿದ ಜಾಗದಲ್ಲಿ ಏಕಾಏಕಿ ಅಂಬೇಡ್ಕರ್ ಬೋರ್ಡ್ ಹಾಕಲಾಗಿದೆ. ಹೀಗಾಗಿ ಅಂಬೇಡ್ಕರ್ ಬೋರ್ಡ್ ಹಾಕಿದ್ದನ್ನು ತೆರವುಗೊಳಿಸಬೇಕೆಂದು ನಾಯಕ ಜನಾಂಗದಿಂದ ಪ್ರತಿಭಟನೆ ನಡೆಸಲಾಗಿದೆ.
ಮೈಸೂರು ಜಿಲ್ಲೆಯ ತಿ.ನರಸಿಪುರ ತಾಲೂಕಿನ ತಲಕಾಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೋರ್ಡ್ ತೆರವುಗೊಳಿಸುವಂತೆ ಪೊಲೀಸರಿಗೆ ನಾಯಕ ಜನಾಂಗದ ಮುಖಂಡರು ಮನವಿ ಮಾಡಿದ್ದಾರೆ. ಇಬ್ಬರ ಜಟಾಪಟಿಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪ್ರತಿಭಟನಾಕಾರರನ್ನು ಚದುರುಸಿದ್ದಾರೆ. ಎರಡು ಸಮುದಾಯದ ಜಟಾಪಟಿಯಿಂದಾಗಿ ಸ್ಥಳದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ.