ಬೆಂಗಳೂರು: ತಮ್ಮ ಮೇಲಿರುವ ಪ್ರಕರಣಗಳ ಬಗ್ಗೆ ಮೊದಲ ಬಾರಿಗೆ ಶಾಸಕ ಮುನಿರತ್ನ ಮಾತನಾಡಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸತ್ಯ ನಾನು ಮಲಗಿರಬಹುದು. ಆದರೆ ಸಾಯಲ್ಲ. ಆ ಮಾರಮ್ಮನ ಮೇಲೆ ನಾನು ಆಣೆ ಮಾಡಿ ಹೇಳುತ್ತೇನೆ ತಪ್ಪು ಮಾಡಿದರೆ, ರಕ್ತ ಕಾರಿ ಸಾಯಲಿ ಎಂದು ಗುಡುಗಿದ್ದಾರೆ.
ಆದಿಚುಂಚನಗಿರಿ ಕಾಲಭೈರವನ ಮೇಲೆ ಅಣೆ ಮಾಡ್ತೇನೆ. ನಾನು ಗುತ್ತಿಗೆದಾರನ ಹೆಣ್ಣುಮಗಳ ಬಗ್ಗೆ ಮಾತಾಡಿದ್ದರೆ, ನಾನು ಅತ್ಯಾಚಾರ ಮಾಡಿದ್ದರೆ ರಕ್ತ ಕಾರಿ ಸಾಯುತ್ತೇನೆ. ನಾನು ತಪ್ಪು ಮಾಡಿದ್ದರೆ ಹಾಗೆ ಸಾಯುವುದು ಬೇಡ. ರಕ್ತ ಕಾರಿ ಸಾಯಲಿ. ಯಾರೂ ಸುಳ್ಳು ದೂರು ಕೊಡಬಾರದು. ಇವರೆಲ್ಲ ಸ್ವಾರ್ಥಕ್ಕೋಸ್ಕರ ಅಷ್ಟರ ಮಟ್ಟಿಗೆ ಹೋಗಿದ್ದಾರೆ. ನನ್ನ ಬಳಿ ಯಾರೇ ಬಂದ್ರೂ ಏನಮ್ಮ, ತಾಯಿ ಅಂತೇನೆ. ಈ ಎರಡು ಪದ ಬಿಟ್ಟು ಬೇರೆ ಪದ ಉಪಯೋಗಿಸಲ್ಲ ಎಂದು ಹೇಳಿದ್ದಾರೆ.
ನೀವು ಕೊಟ್ಟ ಭಿಕ್ಷೆ ಶಾಸಕ ಸ್ಥಾನವನ್ನು ನಾನು ಬಿಟ್ಟುಕೊಡಲ್ಲ. ಅವರಿಗೆ ಬಿಟ್ಟು ಕೊಡುವ ಮೂರ್ಖತನದ ಕೆಲಸ ಮಾಡಲ್ಲ. ನನ್ನನ್ನು ಕಳಿಸಿ ನೀವು ಏನಪ್ಪಾ ಬಾಳ್ತೀರಿ ಇಲ್ಲಿ? ಶಾಸಕ ಆಗಬೇಕು ಅಷ್ಟೇ ತಾನೇ? ನೇರವಾಗಿ ಬಂದು ಕೇಳಬೇಕಿತ್ತು. ನನ್ನ ಮುಂದೆ ಬಂದು ರಾಜೀನಾಮೆ ಕೊಡು ಅನ್ನಿ, ಕೊಡ್ತೇನೆ. ಆದ್ರೆ, ಒಂದು ಹೆಣ್ಣುಮಗಳು ಇನ್ನೊಂದು ಹೆಣ್ಣು ಮಗಳ ಬಗ್ಗೆ ಆ ರೀತಿ ಎಲ್ಲಾ ಸುಳ್ಳು ದೂರು ಕೊಡಲು ಹೋಗಬಾರದು ಎಂದು ಬೇಸರ ಹೊರ ಹಾಕಿದ್ದಾರೆ.