ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಷ್ಠಿತ 2021ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಶುಕ್ರವಾರ ಪ್ರಕಟಗೊಂಡಿದ್ದು, ‘777 ಚಾರ್ಲಿ’ ಚಿತ್ರದ ಅಭಿನಯಕ್ಕಾಗಿ ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ರಘು ಕೆ.ಎಂ. ನಿರ್ದೇಶನದ ‘ದೊಡ್ಡಹಟ್ಟಿ ಬೋರೇಗೌಡ’ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಘೋಷಣೆ ಮಾಡಲಾಗಿದೆ. ಜೊತೆಗೆ ಅರ್ಚನಾ ಜೋಯಿಸ್ ಗೆ ‘ಮ್ಯೂಟ್’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಆಯ್ಕೆಯು ನಡೆದಿದ್ದು, ಪ್ರಶಸ್ತಿಗೆ ಸಲ್ಲಿಕೆಯಾಗಿದ್ದ 58 ಚಿತ್ರಗಳ ಪೈಕಿ 53 ಚಿತ್ರಗಳನ್ನು ವೀಕ್ಷಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ‘777 ಚಾರ್ಲಿ’ ಚಿತ್ರವು ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದ್ದು, ‘ಬಿಸಿಲು ಕುದುರೆ’ ತೃತೀಯ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.
ಇನ್ನೂ ‘ರತ್ನನ್ ಪ್ರಪಂಚ’ ಚಿತ್ರದ ಅಭಿನಯಕ್ಕಾಗಿ ಪ್ರಮೋದ್ ಮತ್ತು ಹಿರಿಯ ನಟಿ ಉಮಾಶ್ರೀ ಅವರಗೆ ಅತ್ಯುತ್ತಮ ಪೋಷಕ ನಟ-ನಟಿ ಪ್ರಶಸ್ತಿಗೆ . ಪುನೀತ್ ರಾಜ್ಕುಮಾರ್ ಅಭಿನಯದ ‘ಯುವರತ್ನ’ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಪಡೆದಿದೆ.

“ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಹೀಗಿದೆ”:
* ಪ್ರಥಮ ಅತ್ಯುತ್ತಮ ಚಿತ್ರ: ದೊಡ್ಡಹಟ್ಟಿ ಬೋರೇಗೌಡ (1 ಲಕ್ಷ ರೂಪಾಯಿ ನಗದು, 50 ಗ್ರಾಂ ಚಿನ್ನದ ಪದಕ)
* ದ್ವಿತೀಯ ಅತ್ಯುತ್ತಮ ಚಿತ್ರ: 777 ಚಾರ್ಲಿ (75 ಸಾವಿರ ರೂಪಾಯಿ ನಗದು, 100 ಗ್ರಾಂ ಬೆಳ್ಳಿ ಪದಕ)
* ತೃತೀಯ ಅತ್ಯುತ್ತಮ ಚಿತ್ರ: ಬಿಸಿಲು ಕುದುರೆ (50 ಸಾವಿರ ರೂಪಾಯಿ ನಗದು, 100 ಗ್ರಾಂ ಬೆಳ್ಳಿ ಪದಕ)
* ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಭಾರತದ ಪ್ರಜೆಗಳಾದ ನಾವು (75 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಯುವರತ್ನ (50 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಮಕ್ಕಳ ಚಿತ್ರ: ಕೇಕ್ (50 ಸಾವಿರ ರೂಪಾಯಿ ನಗದು)
* ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಬಡವ ರಾಸ್ಕಲ್ (ಶಂಕರ್ ಗುರು) (50 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ: ನಾಡ ಪೆದ ಆಶಾ (ಕೊಡವ) (50 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (777 ಚಾರ್ಲಿ) – (20 ಸಾವಿರ ರೂಪಾಯಿ ನಗದು, 100 ಗ್ರಾಂ ಬೆಳ್ಳಿ ಪದಕ)
* ಅತ್ಯುತ್ತಮ ನಟಿ: ಅರ್ಚನಾ ಜೋಯಿಸ್ (ಮ್ಯೂಟ್) – (20 ಸಾವಿರ ರೂಪಾಯಿ ನಗದು, 100 ಗ್ರಾಂ ಬೆಳ್ಳಿ ಪದಕ)
* ಅತ್ಯುತ್ತಮ ಪೋಷಕ ನಟ: ಪ್ರಮೋದ್ (ರತ್ನನ್ ಪ್ರಪಂಚ) – (20 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ (ರತ್ನನ್ ಪ್ರಪಂಚ) – (20 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಕಥೆ: ಮಂಜುನಾಥ್ ಮುನಿಯಪ್ಪ (9 ಸುಳ್ಳು ಕಥೆಗಳು) – (20 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಚಿತ್ರಕಥೆ: ರಘು ಕೆ.ಎಂ (ದೊಡ್ಡಹಟ್ಟಿ ಬೋರೇಗೌಡ) – (20 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (ತಾಯಿ ಕಸ್ತೂರ್ ಗಾಂಧಿ) – (20 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಛಾಯಾಗ್ರಹಣ: ಭುವನೇಶ್ ಪ್ರಭು (ಅಮ್ಮೆ ಸಂಸಾರ – ಕೊಂಕಣಿ) – (20 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಸಂಗೀತ ನಿರ್ದೇಶನ: ಇಮ್ತಿಯಾಜ್ ಸುಲ್ತಾನ್ (ಬಿಸಿಲು ಕುದುರೆ) – (20 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಸಂಕಲನ: ಪ್ರತೀಕ್ ಶೆಟ್ಟಿ (777 ಚಾರ್ಲಿ) – (20 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಬಾಲ ನಟ: ಮಾಸ್ಟರ್ ಅತೀಶ್ ಶೆಟ್ಟಿ (ಕೇಕ್) – (20 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಬಾಲ ನಟಿ: ಬೇಬಿ ಭೈರವಿ (ಭೈರವಿ) – (20 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಕಲಾ ನಿರ್ದೇಶನ: ರವಿ ಸಂತೆಹಕ್ಲು (ಭಜರಂಗಿ 2) – (20 ಸಾವಿರ ರೂಪಾಯಿ ನಗದು)
* ಅತ್ಯುತ್ತಮ ಗೀತ ರಚನೆ: ನಾಗಾರ್ಜುನ ಶರ್ಮ (‘777 ಚಾರ್ಲಿ’ – ‘ಮಡಿಲಲ್ಲಿ ಕಡಲಿನಷ್ಟು ಹನಿಗಳಿದ್ದರೂ…’)
* ಅತ್ಯುತ್ತಮ ಹಿನ್ನೆಲೆ ಗಾಯಕ: ಅನೀಶ್ ಕೇಶವ ರಾವ್ (ಶ್ರೀ ಜಗನ್ನಾಥ ದಾಸರು – ‘ರಾಮದೂತನ ಪಾದ…’)
* ಅತ್ಯುತ್ತಮ ಹಿನ್ನೆಲೆ ಗಾಯಕಿ: ಸಹನಾ ಎಂ. ಭಾರದ್ವಾಜ್ (ದಂಡಿ – ‘ಮುಗಿಲೇ ಮಾತಾಡು ಮನಸಾಗಿ…’)
* ತೀರ್ಪುಗಾರರ ವಿಶೇಷ ಪ್ರಶಸ್ತಿ: ಭೈರವಿ (ಚಿತ್ರ), ಯೋಗಿ ಜಿ. ರಾಜ್ (ವಸ್ತ್ರವಿನ್ಯಾಸ – ಭಜರಂಗಿ 2), ಶಿವಕುಮಾರ್ (ಪ್ರಸಾದನ – ತಾಯಿ ಕಸ್ತೂರ್ ಗಾಂಧಿ)
* ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಶಿವಕುಮಾರ್ ಎಸ್ (ಶಿವಾರ್ಜುನ್ – ಪೊಗರು)



















