ಕೇಂದ್ರ ಸಚಿವ ಮೋಹನ್ ನಾಯ್ಡು ಜೊತೆ ಪ್ರಧಾನಿ ನರೇಂದ್ರ ಮೋದಿ ಕೂಡ ಚರ್ಚೆ ನಡೆಸಿದ್ದಾರೆ. ಪ್ರಧಾನಿ ಮೋದಿ ವಿಮಾನಯಾನ ಸಚಿವ ರಾಮ್ ಮೋಹನ್ ಗೆ ಕರೆ ಮಾಹಿತಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರು ಘಟನಾ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ. ಅಗತ್ಯ ನೆರವಿನಲ್ಲಿ ಯಾವುದೇ ಕೊರತೆಯಾಗಬಾರದು. ಕೂಡಲೇ ಘಟನಾ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ.
ದುರಂತವಾಗಿರುವ ಏರ್ ಇಂಡಿಯಾ ವಿಮಾನದಲ್ಲಿ 217 ಜನ ವಯಸ್ಕರರು ಪ್ರಯಾಣ ಬೆಳೆಸಿದ್ದರು. 11 ಮಕ್ಕಳು, 2 ಹಸುಗೂಸುಗಳ ಪ್ರಯಾಣದಲ್ಲಿದ್ದರು. 169 ಮಂದಿ ಭಾರತೀಯರು, ಓರ್ವ ಕೆನಡಾ ಪ್ರಜೆ, 52 ಬ್ರಿಟೀಷ್ ಪ್ರಜೆಗಳು ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ವಿಮಾನವು 625 ಮೀಟರ್ ಎತ್ತರದಲ್ಲಿದ್ದಾಗ ಈ ದುರಂತ ಸಂಭವಿಸಿದೆ.