ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಮೇಲೆ ಪೊಲೀಸರು, ಭಾರತೀಯ ದಂಡ ಸಂಹಿತೆ (ಐಪಿಸಿ) 10 ಕಾಲಂಗಳ ಅಪರಾಧ ಉಲ್ಲೇಖಿಸಿದ್ದಾರೆ.
ಕೊಲೆ, ಅಪಹರಣ ಹಾಗೂ ಸಾಕ್ಷ್ಯ ನಾಶ ಮಾಡಿರುವ ಸೆಕ್ಷನ್ ಗಳನ್ನು ಹಾಕಲಾಗಿದೆ. ಕೇಸ್ ಗೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರ ಮೇಲೆಯೂ ಒಂದೊಂದು ರೀತಿಯ ಕೇಸ್ ಗಳನ್ನು ಹಾಕಲಾಗಿದೆ. ಇಬ್ಬರ ಪಾತ್ರದ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ದರ್ಶನ್ ಹಾಗೂ ಪವಿತ್ರಾ ವಿರುದ್ಧ ಐಪಿಸಿ ಸೆಕ್ಷನ್ 302 – ಕೊಲೆ ಆರೋಪ- ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ, ಐಪಿಸಿ ಸೆಕ್ಷನ್ 201 – ಸಾಕ್ಷ್ಯ ನಾಶ/ ಸುಳ್ಳು ಮಾಹಿತಿ – ಜೈಲು ಶಿಕ್ಷೆ, ಐಪಿಸಿ ಸೆಕ್ಷನ್ 120(ಬಿ) – ಕ್ರಿಮಿನಲ್ ಪಿತೂರಿ ಅಥವಾ ಅಪರಾಧಕ್ಕೆ ಕುಮ್ಮಕ್ಕು/ 6 ಜೈಲು ಶಿಕ್ಷೆ, ಐಪಿಸಿ ಸೆಕ್ಷನ್ 364 – ಅಪಹರಣ ಅಥವಾ ಅದಕ್ಕೆ ಬೆಂಬಲ/ ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ, ಐಪಿಸಿ ಸೆಕ್ಷನ್ 355 – ವ್ಯಕ್ತಿಯನ್ನು ಅವಮಾನುವ ಉದ್ದೇಶದಿಂದ ಹಲ್ಲೆ / 2 ವರ್ಷ ಜೈಲು ಶಿಕ್ಷೆ, ಐಪಿಸಿ ಸೆಕ್ಷನ್ 143 – ಕಾನೂನು ಬಾಹಿರ ಗುಂಪು, ಐಪಿಸಿ ಸೆಕ್ಷನ್ 147 – ಗುಂಪು ಗಲಭೆ / 2 ವರ್ಷ ಜೈಲು ಶಿಕ್ಷೆ, ಐಪಿಸಿ ಸೆಕ್ಷನ್ 148 – ಮಾರಣಾಂತಿಕ ಆಯುಧ ಬಳಕೆ/ 3 ವರ್ಷ ಜೈಲು ಶಿಕ್ಷೆ, ಐಪಿಸಿ ಸೆಕ್ಷನ್ 149 – ಗುಂಪು ಹಲ್ಲೆಯಲ್ಲಿ ಭಾಗಿ, ಐಪಿಸಿ ಸೆಕ್ಷನ್ 34 – ಗುಂಪು ಹಲ್ಲೆಯಲ್ಲಿ ಭಾಗಿ ಹಾಕಲಾಗಿದೆ.
ಕೊಲೆಯ ಆರೋಪ ಸಾಬೀತಾದರೆ ಐಪಿಸಿ ಸೆಕ್ಷನ್ 302 ಅನುಗುಣವಾಗಿ ಮರಣದಂಡನೆಯಿಂದ ಜೀವಾವಧಿ ಶಿಕ್ಷೆಯವರೆಗಿನ ಶಿಕ್ಷೆ ವಿಧಿಸಬಹುದು. ಅಲ್ಲದೇ, ಇನ್ನುಳಿದಂತೆ ಬೇರೆ ಬೇರೆ ಸೆಕ್ಷನ್ ಗಳಿಗೆ ಬೇರೆ ಬೇರೆ ರೀತಿಯಾಗಿ ಶಿಕ್ಷೆ ವಿಧಿಸಲಾಗುತ್ತದೆ.