ವಿಜಯಪುರ: ದೇಶದಲ್ಲಿ ಮುಸ್ಲಿಂ ಸಂಖ್ಯೆ ಹೆಚ್ಚಾದರೆ, ಸಿದ್ದರಾಮಯ್ಯರನ್ನು (Siddaramaiah) ಮುಖ್ಯಮಂತ್ರಿ ಸ್ಥಾನದಿಂದ ಒದ್ದು ಕೆಳಗೆ ಇಳಿಸಿ ಅಹಮದ್ ಖಾನ್ ಮುಖ್ಯಮಂತ್ರಿ ಆಗುತ್ತಾರೆ. ನಂತರ ಸಿದ್ದರಾಮಯ್ಯರನ್ನು ಚಹಾ ಕೊಡುವುದಕ್ಕೆ ಇಟ್ಟುಕೊಳ್ಳುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿವಾದಾತ್ಮಕ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಸುಭಾಸ್ ಚಂದ್ರ ಬೋಸ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಜನ್ಮದಲ್ಲಿ ನಾ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಮುಂದಿನ ಜನ್ಮ ನೀವು ಹುಟ್ಟಿದರಲ್ವಾ? ದೇವರು ನಿಮ್ಮಂಥವರನ್ನೇಲ್ಲಾ ಹೇಗೆ ಹುಟ್ಟಿಸುತ್ತಾನೆ. ಸಾಕಾಗಿದೆ ದೇವರಿಗೆ ನೀವು ಬರೀ ಮುಸ್ಲಿಂರ ಕೆಲಸ ಮಾಡಿದ್ದೀರಿ. ಹೀಗಾಗಿ ಆತ ನಿಮಗೆ ಮುಂದಿನ ಜನ್ಮ ನೀಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮುಸ್ಲಿಂ ಓಲೈಕೆಯಿಂದ ನಿಮ್ಮ ದೇವರ ಗುಡಿಗಳು ಉಳಿಯೋದಿಲ್ಲ. ಯಾವ ದೇವರಿಗೆ ಹೋಗಿ ಕೈ ಮುಗಿಯುವವರಿದ್ದೀರಿ. 2047ಕ್ಕೆ ಭಾರತವನ್ನ ನಾವು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುತ್ತೇವೆಂದು ಹೇಳುತ್ತಾರೆ. ಕಾರಣ ನೀವು ಒಂದೇ ಮದುವೆ ಆಗೋದು, ಎರಡೇ ಮಕ್ಕಳು. ಅವರು ಐದು ಮದುವೆ ಆಗುತ್ತಾರೆ. ಇಪ್ಪತ್ತೈದು ಮಕ್ಕಳು ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಜಯೇಂದ್ರ ಜೊತೆ ಹೊಂದಾಣಿಕೆಯ ವಿಚಾರವಾಗಿ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ಹೊಂದಾಣಿಕೆಗೆ ಒಪ್ಪಲ್ಲ. ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.