ಬೆಂಗಳೂರು: ಇಂದು ವಿಶ್ವ ಯೋಗ ದಿನಾಚರಣೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿರುವ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಎಲ್ಲರಿಗೂ ಯೋಗ ದಿನದ ಶುಭಾಶಯಗಳು. ಯೋಗದ ಅನುಕೂಲತೆಯನ್ನು ನೀವು ಅರಿತಿದ್ದೀರಿ. ಇಂದು ಒತ್ತಡದ, ವೈಮನಸ್ಸಿನ ಪರಿಸ್ಥಿತಿ ಇದೆ. ಅದನ್ನು ಸರಿಯಾಗಿಟ್ಟುಕೊಳ್ಳಬೇಕು ಅಂದರೆ ನಾವು ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳಬೇಕು. ಈಗ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮಾಡಬೇಕು ಎಂದಿದ್ದಾರೆ.
ಈ ವೇಳೆ ನಟಿ ಸುಧಾರಾಣಿ ಮಾತನಾಡಿ, ಯೋಗದ ಬಗ್ಗೆ ಹಾಗೂ ಅದರ ಉಪಯೋಗದ ಬಗ್ಗೆ ಎಲ್ಲರಿಗೂ ಗೊತ್ತಿದೆ. ನನಗೆ ಇಲ್ಲಿ ಭಾಗವಹಿಸುತ್ತಿರುವುದಕ್ಕೆ ಬಹಳ ಸಂತೋಷ ಇದೆ. ನಿಮ್ಮ ಜೊತೆಗೆ ನಾನು ಯೋಗ ಮಾಡುತ್ತಿರುವುದು ಖುಷಿ ತಂದಿದೆ. ನಾನು ನಾಲ್ಕೈದು ವರ್ಷದವಳಿದ್ದಾಗಲೇ ಯೋಗ ಶುರು ಮಾಡಿದೆ. ನಮ್ಮ ಶೂಟಿಂಗ್ ಟೆನ್ಷನ್ ನಲ್ಲೂ ಯೋಗ ಮಾಡುತ್ತಿದ್ದೆ. ಪ್ರಾಣಾಯಾಮ, ಸೂರ್ಯ ನಮಸ್ಕಾರ ನನಗೆ ಬಹಳ ಉಪಯೋಗ ಆಗಿದೆ.
ಇದನ್ನು ನಾವು ಅಭ್ಯಾಸ ಮಾಡುವುದರ ಜೊತೆಗೆ ಬೇರೆಯವರಿಗೂ ತಿಳಿಸಬೇಕು ಎಂದಿದ್ದಾರೆ.
ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ನಟಿ ಸುಧಾರಾಣಿ ಭಾಗವಹಿಸಿದ್ದರು. ಟ್ರೆಸ್ ಲೈಫ್ ನಲ್ಲಿ ಯೋಗ ಮಾಡಲೇಬೇಕು. ಇದನ್ನು ಪ್ರತಿನಿತ್ಯ ನಾವು ಮಾಡಲೇಬೇಕು ಎಂದಿದ್ದಾರೆ. ಈ ವೇಳೆ ಬಿ.ವೈ. ವಿಜಯೇಂದ್ರ, ನಟ ಕೋಮಲ್ ಕುಮಾರ್, ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಭಾಗಿ