ಮೈಸೂರು: 18ರ ನಂಟು ಈ ಬಾರಿ ಕಪ್ ತಂತು ಅಂತಾ ಮೈಸೂರಿನಲ್ಲಿ ಅಭಿಮಾನಿಗಳು ಹರ್ಷೋತ್ಸವ ನಡೆಸಿದ್ದಾರೆ. ವಿಶ್ವಕಪ್ ಖೋಖೋ ತಂಡದ ಸದಸ್ಯೆಯಾಗಿರುವ ಚೈತ್ರಾ ನೇತೃತ್ವದಲ್ಲಿ ಆರ್ ಸಿಬಿ ತಂಡಕ್ಕೆ ಶುಭಕೋರಲಾಯಿತು.
ಈ ಬಾರಿ 18 ಆರ್ ಸಿಬಿಗೆ ಶುಭವಾಗಲಿದೆ ಅಂತಾ ಅಬಿಪ್ರಾಯ ಪಟ್ಟಿರೋ ಚೈತ್ರಾ ಬಳಗ, 3-6-25 ರ ಸಂಖ್ಯೆಯನ್ನು ಲೆಕ್ಕ ಹಾಕಿದ್ರೆ, 18 ಬರುತ್ತೆ. ಹೀಗಾಗಿ 18ರ ಅದೃಷ್ಟ ಆರ್ ಸಿಬಿ ಪಾಲಿಗೆ ಕಪ್ ತಂದುಕೊಡುತ್ತೆ ಅಂತಾ ಹಾರೈಸಲಾಗಿದೆ. ಈಗಾಗಲೇ ಕೊಹ್ಲಿ ಮತ್ತು ಪಾಟಿದಾರ್ ಅತ್ಯುತ್ತಮ ಫಾರ್ಮ್ ನಲ್ಲಿದ್ದು ಫೈನಲ್ಸ್ ಲ್ಲಿ ಅಮೋಘ ಪ್ರದರ್ಶನ ನೀಡ್ತಾರೆ ಅಂತಾ ಮಕ್ಕಳು ಅಭಿಪ್ರಾಯಪಟ್ಟಿದ್ದಾರೆ.