ಮಂಡ್ಯ : ಡಿಕೆ ಶಿವಕುಮಾರ್ ಸಿಎಂ ಆಗೋದನ್ನ ತಡೆಯೋಕೆ ನಾನ್ಯಾರು, ಕಳೆದ ಒಂದು ವಾರದಿಂದ ಸಿಎಂಗೆ ಸ್ಥಾನ ಬಿಟ್ಕೊಡಿ ಅಂತ ನಾನೇ ಹೇಳುತ್ತಿದ್ದೇನೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಡಿಕೆಶಿ ಸಿಎಂ ಆಗೋದಕ್ಕೆ ಹೆಚ್ಡಿಕೆ ಅಡ್ಡಗಾಲು ಹಾಕ್ತಿದ್ದಾರೆ ಎಂಬ ಮದ್ದೂರು ಶಾಸಕ ಕದಲೂರು ಉದಯ್ ಆರೋಪಕ್ಕೆ ಇಂದು ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ಡಿಕೆ ಸಿಎಂ ಆಗೋದನ್ನ ನಾನ್ ಹೇಗೆ ತಡೆಯೋಕೆ ಆಗತ್ತದೆ. ಉದಯ್ ಅವರನ್ನ ಸಿಎಂ ಜೊತೆ ಮಾತಾಡೋಕೆ ಹೇಳಿ.ನಾನು ಕಳೆದ ಒಂದು ವಾರದಿಂದ ಸಿಎಂಗೆ ಬಿಟ್ಟುಕೊಡಪ್ಪ ಅಂತನೇ ಹೇಳ್ತಿದ್ದೀನಿ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ಗ್ರಾಮೀಣ ಭಾಗದ ಜನರ ಕಷ್ಟ ಕೇಳುತ್ತಿಲ್ಲ ಎಂಬ ಕದಲೂರು ಉದಯ್ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಬರೀ ಫೈವ್ ಸ್ಟಾರಲ್ಲೆ ಇದ್ದೀನಿ. ಶ್ರೀಲಂಕಾದಲ್ಲಿ ಹೋಗಿ ತಲೆ ಮರೆಸಿಕೊಂಡಿದ್ದೀನಿ. ಜಾಮೀನು ಪಡೆಯುವವರೆಗೂ ಶ್ರೀಲಂಕಾದಲ್ಲಿ ಕುಂತಿದ್ದೀನಿ ಎಂದು ಪರೋಕ್ಷವಾಗಿ ಉದಯ್ ಅವರಿಗೆ ಟಾಂಟ್ ನೀಡಿದ್ದಾರೆ.
ಇದನ್ನೂ ಓದಿ : ಪತ್ರಕರ್ತನ ಹತ್ಯೆ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ ರಾಮ್ ರಹೀಮ್ ದೋಷಮುಕ್ತ!



















