ಕೊಪ್ಪಳ : ಜನಾರ್ದನ ರೆಡ್ಡಿ ಅನರ್ಹ ವಿಚಾರಕ್ಕೆ ಕೊಪ್ಪಳದ ಬಸಾಪುರ ಏರ್ಪೋರ್ಟ್ ನಲ್ಲಿ ಸಿ ಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಅವರಿಗೆ ಕೋರ್ಟ್ ಶಿಕ್ಷೆ ಕೊಟ್ಟಿದೆ. ಅಕ್ರಮ ಗಣಿಗಾರಿಕೆ ಮಾಡಿರೋದಕ್ಕೆ ಶಿಕ್ಷೆ ಆಗಿದೆ. ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದ್ರೆ ಉಪಚುನಾವಣೆ ಮಾಡ್ತಿವಿ,ನಾನು ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಪಾದಯಾತ್ರೆ ಮಾಡಿದ್ವಿ, ಆಗ ಯಡಿಯೂರಪ್ಪ ಜನಾರ್ದನರೆಡ್ಡಿ ಆದಿಯಾಗಿ ನನ್ನ ವಿರುದ್ದ ಬಂದ್ರು, ನಾವು ಅಕ್ರಮ ಗಣಿಗಾರಿಕೆ ಮಾಡಿದವರಿಗೆ ಶಿಕ್ಷೆ ಆಗುತ್ತೆ, ಅಕ್ರಮ ಗಣಿಗಾರಿಕೆ ನಿಲ್ಲಬೇಕು ಎಂದು ಹೋರಾಟ ಮಾಡಿದ್ವಿ, ನ್ಯಾಯಾಲಯ ಅವರಿಗೆ ಶಿಕ್ಷೆ ಕೊಟ್ಟಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಚುನಾವಣೆ ವೇಳೆ ರೆಡ್ಡಿಗೆ ಸಿದ್ದರಾಮಯ್ಯ ಸಪೋರ್ಟ ಮಾಡಿದ್ರ ಎಂಬ ರೆಡ್ಡಿ ಬಹಿರಂಗ ಹೇಳಿಕೆ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅವರು ಯಾವ ಪಕ್ಷದಿಂದ ಚುನಾವಣೆ ನಿಂತಿದ್ರು, ಈಗ ಯಾವ ಪಕ್ಷದಲ್ಲಿದ್ದಾರೆ..? ರೆಡ್ಡಿ ಹಾಗೆ ಹೇಳಿರೋದು ಸುಳ್ಳು….! ಸುಳ್ಳು…!ಸುಳ್ಳು…! ನನ್ನ ಸುದೀರ್ಘ 50 ವರ್ಷದ ರಾಜಕಾರಣದಲ್ಲಿ ವಿರೋಧ ಮಾಡಿದ್ದು ಎರಡೇ ಒಂದು ಬಿಜೆಪಿ ಮತ್ತು RSS , ನಾನು ವಿರೋಧ ಮಾಡಿದ್ದು ಬಿಜೆಪಿ ಆರ್ ಎಸ್ ಎಸ್. ಬರಕೋಳಿ ಎಂದು ಹೇಳಿದರು.