ಬೆಳಗಾವಿ : ವಿಜಯೇಂದ್ರನಿಗೆ ಬೇರೆ ಏನು ಕೆಲಸ ಇದೆ, ಪ್ರತಿಭಟನೆ ಮಾಡುತ್ತಾರ ಮಾಡಲಿ ಬಿಡಿ ಎಂದು ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಶಾಸಕ ಶಿವರಾಮ್ ಹೆಬ್ಬಾರ್ ನಾನು ಕಾಂಗ್ರೆಸ್ಗೆ ಹೋಗೊದಾದರೆ ಹೇಳಿ ಹೋಗುತ್ತಿನಿ ಕದ್ದು ಹೋಗೊಲ್ಲಾ ನಾನು ಉತ್ತರ ಕನ್ನಡ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಮಾತನಾಡುತ್ತೇನೆ. ಕಬ್ಬು ಬೆಳೆಗಾರರ ಸಮಸ್ಯೆ ಒಂದು ಹಂತದಲ್ಲಿ ಮುಗಿದಿದೆ. ಎಲ್ಲಾ ಫ್ಯಾಕ್ಟರಿ ಮಾಲಿಕರು ಸಿಎಂ ಸೂಚನೆ ಪಾಲಿಸಿದ್ದಾರೆ. ನನ್ನದು ಹಾವೇರಿಯಲ್ಲಿ ಫ್ಯಾಕ್ಟರಿ ಇದೆ. ನಮ್ಮ ಸಮಸ್ಯೆ ಬಗೆ ಹರಿದಿದೆ ಎಂದಿದ್ದಾರೆ.
ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ವಿಚಾರ ಸಂಬಂಧಪಟ್ಟಂತೆ ಮಾತನಾಡಿದ ಅವರು ನನ್ನ ಉಚ್ಚಾಟನೆ ಮಾಡಿದ ಮೇಲೆ ಅವರ ಜೊತೆ ಹೋಗೊ ಅವಶ್ಯ ಏನಿದೆ ಬಿಜೆಪಿ ಹೇಳೊದೆಲ್ಲಾ ನ್ಯಾಯ ಅಂತ ಒಪ್ಪೊದಕ್ಕೆ ಆಗೊಲ್ಲಾ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ BEMLನಲ್ಲಿ 50 ಹುದ್ದೆಗಳ ನೇಮಕಾತಿ : 43 ಸಾವಿರ ರೂ. ಸಂಬಳ



















