ಮೈಸೂರು: ರೌಡಿ ಶೀಟರ್ ಕಾರ್ತಿಕ್ ಹತ್ಯೆ ವಿಚಾರವಾಗಿ ಎಸ್ಪಿ ವಿಷ್ಣುವರ್ಧನ್ ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರುಣ ವ್ಯಾಪ್ತಿಯಲ್ಲಿ ಕಾರ್ತಿಕ್ ಕೊಲೆ ಆಗಿದೆ. ಕಾರ್ತಿಕ್ ಮೂಲತಃ ಮೈಸೂರು ಮೂಲದ ವ್ಯಕ್ತಿ. ಈತನ ವಿರುದ್ಧ ರೌಡಿ ಶೀಟರ್ ಕೂಡ ಇದೆ. ಕೊಲೆಯಾದ ಬಳಿಕ 3 ತಂಡ ರಚನೆ ಮಾಡಿ ಆರೋಪಿಗಳ ವಶಕ್ಕೆ ಬಲೆ ಬಿಸಲಾಗಿತ್ತು. ಈಗಾಗಲೇ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಕೊಲೆ ಮಾಡಿರುವ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ 7 ಜನರನ್ನು ವಶಕ್ಕೆ ಪಡೆದಿದ್ದೇವೆ ಎಂದಿದ್ದಾರೆ.
ಮೊದಲು ದುಡ್ಡಿನ ವಿಚಾರಕ್ಕೆ ಕೊಲೆ ಆಗಿದೆ ಅಂತ ತನಿಖೆ ನಡೆಸಲಾಗಿತ್ತು. ಆದರೆ, ಮಹಿಳೆ ವಿಚಾರಕ್ಕೆ ಕೊಲೆ ನಡೆದಿರುವುದು ತನಿಖೆಯ ವೇಳೆ ಬಯಲಾಗಿದೆ. ಕಾರ್ತಿಕ್ ಈ ಹಿಂದೆ ಪ್ರವೀಣ್ ಗೆ ಕೊಲೆ ಬೆದರಿಕೆ ಹಾಕಿದ್ದ. ಈ ಹಿನ್ನಲೆಯಲ್ಲಿ ಪ್ರವೀಣ್ ಗುಂಪು ಕಟ್ಟಿಕೊಂಡು ಬಂದು ಕಾರ್ತಿಕ್ ನನ್ನು ಹತ್ಯೆ ಮಾಡಿದ್ದಾನೆ. ಪ್ರವೀಣ್ ಈ ಹಿಂದೆ ಕಾರ್ತಿಕ್ ಕಾರ್ ಡ್ರೈವರ್ ಆಗಿದ್ದ. ಕೊಲೆಯಲ್ಲಿ ಮಹಿಳೆಯ ಕೈವಾಡವೂ ಇದೆ ಎಂದಿದ್ದಾರೆ.
ಕಾರ್ತಿಕ್ ರಿಯಲ್ ಎಸ್ಟೇಟ್ ಬ್ಯೂಸಿನೆಸ್ ಮಾಡುತ್ತಿದ್ದ. ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲರೂ ಕಾರ್ತಿಕ್ ಗೆ ಪರಿಯ ಇದ್ದವು. ಕೊಲೆ ಮಾಡಿದವರೆಲ್ಲ ಕಾರ್ತಿಕ್ ವಿರುದ್ಧ ದ್ವೇಷ ಹೊಂದಿದ್ದರು. ಪ್ರವೀಣ್ ಗೆ ಕಾರ್ತಿಕ್ ನಿಂದ ಜೀವ ಭಯ ಇತ್ತು. ಹೀಗಾಗಿ ಇವನನ್ನು ಬಿಟ್ಟರೆ, ನನ್ನೇ ಮುಗಿಸುತ್ತಾನೆಂದು ಪ್ಲ್ಯಾನ್ ಮಾಡಿ ಹತ್ಯೆ ಮಾಡಿದ್ದಾರೆ ಎಂದಿದ್ದಾರೆ.