ಕೊಪ್ಪಳ: ದಕ್ಷಿಣ ಕನ್ನಡದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣ ರಾಜ್ಯದಲ್ಲಿ ಅರಾಜಕತೆ ಮೂಡಿಸಿದೆ. ವಿಳಂಬ ನ್ಯಾಯದಿಂದ ಜನರು ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಕುರಿತು ಸರ್ಕಾರ ಸಮಗ್ರ ಕಾನೂನು ತರಬೇಕು ಎಂದು ಉಡುಪಿ ಪೇಜಾವರದ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದ್ದಾರೆ.
ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ಘಟನೆಯ ನಂತರ ಪಿಎಸ್ಐ ಮೇಲೆ ತನಿಖೆ ನಡೆಸಲಾಗುತ್ತಿದೆ. ಒಂದು ಘಟನಗೆ ಪ್ರತೀಕಾರವಾಗಿ ಇನ್ನೊಂದು ಘಟನೆ ನಡೆಯುತ್ತಿದೆ. ಇದು ನಿಲ್ಲಬೇಕು ಎಂದು ತಿಳಿಸಿದರು.
ಕಾಶ್ಮೀರ ನರಮೇಧದ ವಿಚಾರವಾಗಿ ಪ್ರತಿಕ್ರಿಯಿಸಿ ಯುದ್ದ ನಡೆಯಬೇಕೊ? ಬೇಡವೊ? ಎಂಬುವುದನ್ನು ನಾವು ನಿರ್ಧಾರ ಮಾಡುವುದಲ್ಲ. ದೇಶದಲ್ಲಿ ಜನರು ಭಯವಿಲ್ಲದೆ ಸಂಚರಿಸುವಂತಾಗಬೇಕು. ಈ ಕುರಿತು ಸಮಗ್ರ ಚಿಂತನೆಯನ್ನು ನಡೆಸಬೇಕು. ರಾಜ್ಯದ ನಾಯಕರು ಸೈನಿಕರ ನೈತಿಕತೆಯನ್ನು ಕುಗ್ಗಿಸುವಂತೆ ಮಾತನಾಡಬಾರದು. ನಮ್ಮ ಸೈನಿಕರಿಗೆ ನಾವೇ ಪ್ರೋತ್ಸಾಹ ನೀಡಬೇಕು. ಧೈರ್ಯ ತುಂಬಬೇಕು. ಕಾರ್ಯಾಚರಣೆ ಮಾಡುವ ಸೈನಿಕರ ಬಗ್ಗೆ ಮಾತನಾಡಬಾರದು ಎಂದು ತಿಳಿಸಿದರು.
ಜಾತಿಗಣತಿ ವಿಚಾರವಾಗಿ ಮಾತನಾಡಿ, ಜಾತಿ ಗಣತಿ ಮಾಡುತ್ತಿರುವುದು ಪ್ರಭುತ್ವದ ನಿರ್ಧಾರ. ಗಣತಿಯ ನಂತರ ಏನಾಗುತ್ತೊ ಆಗ ಪ್ರತಿಕ್ರಿಯಿಸುತ್ತೇವೆ. ಒಂದು ಸರ್ಕಾರ ಮನ್ನಡಯಬೇಕೆಂದರೆ ಪ್ರತಿಯೊಬ್ಬರ ನಿರ್ಧಾರವನ್ನು ಪರಿಗಣಿಸಬೇಕು ಎಂದಿದ್ದಾರೆ.