ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ತುಷಾರ್ ಗಿರಿನಾಥ್ ತಮ್ಮ ಸೇವೆ ಕುರಿತು ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೂರು ವರ್ಷ ಬಿಬಿಎಂಪಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದೇನೆ. ಇವತ್ತು ಮಹೇಶ್ವರ್ ರಾವ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಗಿದೆ. ಯಾವುದೇ ಒಂದು ಹುದ್ದೆ ಬಿಡುವಾಗ ಸಾಕಷ್ಟು ಬಾರಿ ಇನ್ನು ಕೆಲಸ ಮಾಡಬೇಕಿತ್ತು ಅನಿಸುತ್ತದೆ. ಮಾಡುವ ಸಾಕಷ್ಟು ಕೆಲಸ ಕೂಡ ಬಾಕಿ ಇರುತ್ತದೆ ಎಂದಿದ್ದಾರೆ.
ಮಾಧ್ಯಮಗಳಲ್ಲಿ ಟೀಕೆ, ಟಿಪ್ಪಣಿಗಳು ಬಂದಿವೆ. ಟೀಕೆಗಳು ಬಂದಾಗ ನಾವು ಅಷ್ಟೊಂದು ಕೆಲಸ ಮಾಡಿದ್ದರೂ ಟೀಕೆಗಳನ್ನು ಕೇಳಿಸಿಕೊಳ್ಳಬೇಕಾಯಿತು ಅನಿಸುತ್ತದೆ. ನಮ್ಮ ಅಧಿಕಾರಿ ವರ್ಗದವರು ಕೆಲಸ ಮಾಡುವುದು ಅನಿವಾರ್ಯವಾಗಿದೆ. ಮಹೇಶ್ವರ್ ರಾವ್ ಟೀಕೆ ಟಿಪ್ಪಣಿಗಳನ್ನು ತುಂಬಾ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.