ಬೆಂಗಳೂರು: ಸಚಿವ ಶಿವಾನಂದ್ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಾನಂದ್ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಮುಂದೆ ನಾವು ಆಲೋಚನೆ ಮಾಡುತ್ತೇವೆ. ಎಲ್ಲವನ್ನೂ ಸಂವಿಧಾನದ ಪ್ರಕಾರವೇ ನಿರ್ಧಾರ ಮಾಡುತ್ತೇವೆ. ಅವರ ವಿಚಾರವನ್ನು ಅವರು ಪತ್ರದ ಮೂಲಕ ಹೇಳಿದ್ದಾರೆ. ನಾವು ಅದನ್ನು ಪರಿಶೀಲನೆ ನಡೆಸಿ, ಕಾನೂನು ಪ್ರಕಾರ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.
ರಾಜೀನಾಮೆ ಕೋಡುವುದು ಅವರ ಹಕ್ಕು. ಸರಿ ಇದೆಯಾ? ಅಥವಾ ಇಲ್ಲವಾ ಎಂಬುವುದರ ಬಗ್ಗೆ ನಿರ್ಣಯ ಮಾಡುತ್ತೇವೆ ಎಂದಿದ್ದಾರೆ.