ನಟ ಕಮಲ್ ಹಾಸನ್ ರಿಗೂ ಕನ್ನಡದ ಬಗ್ಗೆ ಅಭಿಮಾನವಿದೆ. ಬೆಂಗಳೂರಿನ ಬಗ್ಗೆ, ಕನ್ನಡ ಸಿನಿಮಾಗಳ ಬಗ್ಗೆ, ನಮ್ಮ ಕುಟುಂಬದ ಬಗ್ಗೆ ಅವರು ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಇದೆಲ್ಲವನ್ನು ಬಿಟ್ಟು ಬೇರೊಂದು ವಿಚಾರವನ್ನು ವೈಭವಿಕರಿಸೋದು ಎಷ್ಟು ಸರಿ ಅಂತಾ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಪ್ರಶ್ನಿಸಿದ್ದಾರೆ.
ಕನ್ನಡ ಭಾಷೆ ತಮಿಳಿನಿಂದ ಹುಟ್ಟಿತ್ತು ಅನ್ನೋ ಮಾತುಗಳನ್ನಾಡಿ ವಿವಾದ ಸೃಷ್ಟಿಸಿದ್ದ ಕಮಲ್ ಹಾಸನ್ ಪರವೀಗ ಶಿವರಾಜ್ ಕುಮಾರ್ ಬ್ಯಾಟ್ ಬೀಸಿದ್ದಾರೆ. ಕೇವಲ ವಿವಾದಕ್ಕಾಗಿ ವಿವಾದ ಸೃಷ್ಟಿಸಬೇಡಿ.
ಹಾಗಂತಾ ಕನ್ನಡಾಭಿಮಾನ ಸೀಮಿತವಾಗಿರಬಾರ್ದು. ನಾನು ಕನ್ನಡಕ್ಕಾಗಿ ಹೋರಾಡ್ತೀನಿ, ಬೇಕಿದ್ರೆ ಸಾಯ್ತೀನಿ ಅಂತಲೂ ಶಿವಣ್ಣ ಗುಡುಗಿದ್ದಾರೆ. ಕೇವಲ ಒಂದೇ ವಿಚಾರವನ್ನು ಇಟ್ಟುಕೊಂಡು ದೊಡ್ಡದಾಗಿಸೋದು ಸೂಕ್ತವಲ್ಲ. ಕೇವಲ ಬಿಲ್ಡಪ್ ಗಾಗಿ ಕನ್ನಡಾಭಿಮಾನ ತೋರೋದು ಬೇಡ ಅಂತಾ ಟೀಕಾರರಿಗೆ ಶಿವಣ್ಣ ತಿರುಗೇಟು ನೀಡಿದ್ದಾರೆ. ನಾನು ಕಮಲ್ ಹಾಸನ್ ರ ದೊಡ್ಡ ಅಭಿಮಾನಿ. ಅಂಥಾ ನಟರು ನಮ್ಮನ್ನ ತಮ್ಮಲ್ಲಿಗೆ ಕರೆದು ಗೌರವಿಸಿದ್ದಾರೆ ಅದನ್ನು ನಾವು ಸ್ಮರಿಸಬೇಕು ಅಂತಲೂ ಶಿವರಾಜ್ ಕುಮಾರ್ ಹೇಳಿದ್ದಾರೆ.