ಜೈಲಿನಿಂದ ಬಿಡುಗಡೆಯಾದ ನಂತರ ಜನಾರ್ದನ್ ರೆಡ್ಡಿ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದ ದುರಾಸೆಗೆ ಸಿದ್ದರಾಮಯ್ಯ ಪಾದಯಾತ್ರೆ ಮಾಡಿ ನನ್ನ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಮಾಡಿದರು.
ಆದರೆ, ಹೈದ್ರಾಬಾದ್ ಸಿಬಿಐ ಕೋರ್ಟ್, ಅಕ್ರಮ ಗಣಿಗಾರಿಕೆ ಬಗ್ಗೆ ಓಬಳಾಪುರಂ ಮೈನಿಂಗ್ ಕಂಪನಿಗೆ ಕ್ಲೀನ್ ಚಿಟ್ ನೀಡಿದೆ. ಕರ್ನಾಟಕದ ಹಲವು ಕಡೆ ಅಕ್ರಮ ಗಣಿಗಾರಿಕೆ ಮಾಡಿ, ವಿದೇಶಕ್ಕೆ ರಫ್ತು ಮಾಡಿರುವ ಆರೋಪ ಪ್ರೂ ಮಾಡಲು ಆಗಿಲ್ಲ.
ಓಬಳಾಪುರಂ ಮೈನಿಂಗ್ ಕಂಪನಿಗೆ ಲೈಸೆನ್ಸ್ ನೀಡಿದ್ದಾರೆ ಎನ್ನುವ ವಿಚಾರಕ್ಕೆ ಶಿಕ್ಷೆ ಆಗಿದೆ. ಈಗಾಗಲೇ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇನೆ. ಅಂಜನಾದ್ರಿ ನನ್ನ ಶಾಸಕ ಸ್ಥಾನ ಉಳಿಸಿದ್ದಾನೆ. ಉಡುಪಿ ಪುತ್ತಿಗೆ ಮಠಕ್ಕೆ ಹೋದಾಗ ಕೋಟಿ ಗೀತಾ ಲೇಖನ ಯಜ್ಞ ಪುಸ್ತಕ ನೀಡಿದ್ದರು. ಪುಸ್ತಕದಲ್ಲಿನ ಶ್ಲೋಕಗಳನ್ನು ಸ್ವತಃ ಬರೆದಿದ್ದೆನೆ. 6 ದಿನ ಜೈಲಿನಲ್ಲಿ ಇದ್ದಾಗ 18 ಅಧ್ಯಾಯಗಳನ್ನು ಬರೆದಿದ್ದೇನೆ ಎಂದಿದ್ದಾರೆ.