ಇದು ಜಾತಿ ಗಣತಿಯಲ್ಲ ಬದಲಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸರ್ವೆ ಅಂತಾ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವರದಿ ಬಗ್ಗೆ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ತಿಳಿಸಲು ಮುಕ್ತ ಅವಕಾಶವಿದೆ. ನಾಳೆ ಸಂಪುಟ ಸಭೆ ಕರೆದಿದ್ದೇವೆ ಅಲ್ಲಿ ಸಮಗ್ರ ಚರ್ಚೆ ನಡೆಯುತ್ತದೆ.. ಐವರು ಒಕ್ಕಲಿಗ ಸಚಿವರಿದ್ದಾರೆ. ವರದಿ ಅವರ ಕೈಯಲ್ಲೂ ಇದೆ. ಓದಿಕೊಂಡು ಬಂದು ಚರ್ಚೆ ಮಾಡಲಿ. ಆಮೇಲೆ ಅಂಗೀಕರಿಸುವುದು ಬಿಡುವುದು ನಿರ್ಧಾರವಾಗುತ್ತೆ ಅಂತಾ ಸಿಎಂ ಪುನರುಚ್ಛರಿಸಿದ್ದಾರೆ.
ಶಾಸಕ ಶಿವಗಂಗಾ, ಅವರ ಅಭಿಪ್ರಾಯ ಹೇಳಿದ್ದಾರೆ. ಹಾಗಂತಾ ಅವರೇನು ಸಚಿವರಲ್ಲ ಅಂತಾ ಸಿಎಂ ಪರೋಕ್ಷ ಟಾಂಗ್ ನೀಡಿದ್ದಾರೆ.