ಜೆಡಿಎಸ್ ಮುಳುಗುತ್ತಿರುವ ಹಡಗು ಎನ್ನುವುದು ಸುಳ್ಳು. ಹೆಚ್ ಡಿ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿಯವರು ಪಕ್ಷವನ್ನು ತಳಮಟ್ಟದಿಂದ ಸಂಘಟಿಸುತ್ತಿದ್ದಾರೆ. ಒಂದು ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಶೇ. 20ರಷ್ಟು ವೋಟ್ ಶೇರ್ ಪಡೆಯುತ್ತಿದೆ. ಅಲ್ಲಿಗೆ ಜೆಡಿಎಸ್ ನ ಸಾಮರ್ಥ್ಯ ಏನು ಅಂತಾ ಎಲ್ಲರಿಗೂ ಅರ್ಥವಾಗುತ್ತೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರವಾಸ ಮಾಡಲು ಮುಂದಾಗಿದ್ದೇನೆ. ನಾಡಿನ ಜನರ ಕಷ್ಟಗಳನ್ನು ಅರೆತು ಅವರಿಗೆ ನ್ಯಾಯ ಕೊಡಿಸುವ ಕಾರ್ಯವನ್ನು ಮಾಡುತ್ತೇನೆ. ಪಕ್ಷವನ್ನು ಮುಂದಿನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟನೆಗೆ ಹೊಸ ಬಲ ನೀಡುತ್ತೇನೆ ಎಂದಿದ್ದಾರೆ.
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದಲೇ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಭವಿಷ್ಯದಲ್ಲಿ ಈ ದೋಸ್ತಿ ಎರಡೂ ಪಕ್ಷಗಳಿಗೆ ಅನುಕಾಲವಾಗಲಿದೆ ಎಂದಿದ್ದಾರೆ. ರಾಜ್ಯ ಪ್ರವಾಸದ ಬಳಿಕ ಪಕ್ಷದ ಅಧ್ಯಕ್ಷ ಹುದ್ದೆಗೆ ನೇಮಕವಾಗ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸದ ನಿಖಿಲ್, ನಮ್ಮೆಲ್ಲಾ ನಾಯಕರ ಬಲದಿಂದಲೇ ನಾಡಿನ ಜನರ ವಿಶ್ವಾಸ ಗೆಲ್ಲುತ್ತೀವಿ ಎಂದಿದ್ದಾರೆ.