ಬೆಂಗಳೂರು: ರಾತ್ರಿ ಸುರಿದ ಭಾರೀ ಮಳೆಗೆ ರಾಜಧಾನಿಯಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ನಗರದಲ್ಲಿನ ಸಾಯಿ ಲೇಔಟ್ ನಲ್ಲಿ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.
ರಸ್ತೆ ತುಂಬಿ ಮನೆಗಳಿಗೂ ರಾಜಕಾಲುವೆಯ ನೀರು ನುಗ್ಗಿದೆ. ಬೆಳಗ್ಗೆಯಾದರೂ ನೀರು ಕಡಿಮೆಯಾಗದೆ ಜನರು ಪರದಾಟ ನಡೆಸುವಂತಾಗಿದೆ. ಇದಕ್ಕೂ ಮೊದಲು ಕೂಡ ಸುರಿದ ಮಳೆಯಿಂದಾಗಿ ಈ ಭಾಗದಲ್ಲಿನ ಮನೆಗಳಿಗೆ ನೀರು ನುಗ್ಗಿ ಜನರು ಪರದಾಟ ನಡೆಸುವಂತಾಗಿದೆ.
ಈ ಕುರಿತು ಹಲವು ಬಾರಿ ಸಿಎಂ, ಡಿಸಿಎಂ ಹಾಗೂ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜಕಾಲುವೆ ನೀರು ನುಗ್ಗಿದ್ದರಿಂದಾಗಿ ಜನರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಸಾಯಿ ಲೇಔಟ್ ನ ಕಾವೇರಿನಗರದಲ್ಲಿ ನೀರು ತುಂಬಿ ಅವಾಂತರ ಸೃಷ್ಟಿಯಾಗಿದೆ. ಮನೆಗಳಿಗೆ ಹೋಗುವುದಕ್ಕೂ ಆಗದಂತೆ ರಸ್ತೆಯಲ್ಲಿ ರಾಜಕಾಲುವೆ ನೀರು ನಿಂತು, ಜನರಿಗೆ ದಿಗ್ಬಂಧನ ಹಾಕಿದೆ. ಹೀಗಾಗಿ ಜನ ಪರದಾಟ ನಡೆಸಿದ್ದಾರೆ.