ಬೆಂಗಳೂರು: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ರಾಷ್ಟ್ರವೇ ಕುದಿಯುತ್ತಿದೆ. ಈ ವೇಳೆ ಕಠಿಣ ನಿರ್ಧಾರ ಕೈಗೊಂಡಿರುವ ಪ್ರಧಾನಿ ಮೋದಿ, ಪಾಕ್ ಗೆ ಮುಟ್ಟಿ ನೋಡಿಕೊಳ್ಳುವ ಏಟು ಕೊಟ್ಟಿದ್ದಾರೆ.
ಅಲ್ಲದೇ, ಪಾಕಿಸ್ತಾನಿಗಳಿಗೆ ದೇಶ ತೊರೆಯುವಂತೆ ಸೂಚಿಸಿದ್ದಾರೆ. ರಾಜ್ಯದಲ್ಲು ಕೂಡ ಪಾಕಿಸ್ಥಾನಿಗಳು ಇದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಸುಮಾರು 98 ಜನ ಪಾಕಿಸ್ತಾನಗಳು ವಾಸಿಸುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಅವರನ್ನು ಪತ್ತೆ ಹಚ್ಚಿ ಮರಳಿ ಅವರ ರಾಷ್ಟ್ರಕ್ಕೆ ಕಳುಹಿಸಬೇಕೆಂದು ಗೃಹ ಇಲಾಖೆ ಸೂಚನೆ ನೀಡಿದೆ.