ಬೆಂಗಳೂರು | ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಬಿಎನ್ಎಸ್ ಸೆಕ್ಷನ್ & ಲಾ ಭಾಷಾಂತರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ, 1908 (1908ರ 5) (ಕರ್ನಾಟಕ ತಿದ್ದುಪಡಿಗಳೂ ಸೇರಿದಂತೆ), ಭಾರತೀಯ ನ್ಯಾಯ ಸಂಹಿತೆ 2023(2023ರ 45) BNS, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 (2023ರ 46) (BNSS) ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ 2023 (2023ರ 47) (BSA)ಗಳ ದ್ವೀಭಾಷಾ (Diglot) ಆವೃತ್ತಿಗಳ ಲೋಕಾರ್ಪಣೆ ಹಾಗೂ ಹಾಗೂ ಕಾನೂನು ಭಾಷಾಂತರದ ಸವಾಲುಗಳ ಕುರಿತ ವಿಚಾರ ಸಂಕಿರಣ ನಡೆಯಲಿದೆ.
ಈ ಕಾನೂನು ಜಾಗೃತಿ ಕಾರ್ಯಕ್ರಮವು ಜನವರಿ 21ರಂದು ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆಯನ್ನು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ವಹಿಸಲಿದ್ದಾರೆ. ಜೊತೆಗೆ ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಆಂಧ್ರಪ್ರದೇಶ ಡ್ರಾವಿಡ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ದೊರಸಾಮಿಯವರು ಹಾಜರಿರಲಿದ್ದಾರೆ.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಅಧ್ಯಕ್ಷ ಜಿ.ಶ್ರೀಧರ್ ಅವರು ‘ಕಾನೂನು ಭಾಷಾಂತರದ ಸವಾಲುಗಳ ಕುರಿತ ವಿಚಾರ ಸಂಕಿರಣ’ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಶಿಕ್ಷಣ ತಜ್ಞ ಪಿ. ವಿ. ನಿರಂಜನಾರಾಧ್ಯ ಅವರು ವಿಚಾರಮಂಡನೆ ಮಾಡಲಿದ್ದಾರೆ.
ಇದನ್ನೂ ಓದಿ : ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ ಸಂಭ್ರಮ | ಕೆಎಸ್ಸಿಎಗೆ ಗೃಹ ಇಲಾಖೆಯಿಂದ ಗ್ರೀನ್ ಸಿಗ್ನಲ್



















