ಗದಗ: ಗ್ರಾಮಸ್ಥರೆಲ್ಲಾ ಸೇರಿ ಅನಾಥ ವೃದ್ಧೆಯ ಅಂತ್ಯಸಂಸ್ಕಾರ ಮಾಡಿ ಮಾದರಿಯಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮದಲ್ಲಿ ನಡೆದಿದೆ. ಬಟ್ಟೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಈರಮ್ಮ ಎನ್ನುವ ವೃದ್ಧೆ ವಾಸ ಮಾಡುತ್ತಿದ್ದರು.
ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ನಂತರ ಬಟ್ಟೂರು ಗ್ರಾಮದ ಬಸವೇಶ್ವರ ಯುವಕಮಂಡಲ ಹಾಗೂ ಗ್ರಾಮಸ್ಥರು ವೃದ್ದೆಗೆ ಯಾರು ಇಲ್ಲದ ಕಾರಣ ತಾವೇ ಸಂಪ್ರದಾಯಬದ್ಧವಾಗಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.