ಬೆಂಗಳೂರು: ನಾವು ಪ್ರತಿದಿನ ಬಳಸುವ ತರಕಾರಿಗಳಲ್ಲೇ ವಿಷಕಾರಿ ಅಂಶಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. Central Pollution Control Board (CPCB) ನೇತೃತ್ವದಲ್ಲಿ ನಡೆದ ಪರೀಕ್ಷೆಯಲ್ಲಿ ಸೀಸ ಹಾಗೂ ನಿಷೇಧಿತ ಕೀಟನಾಶಕಗಳ ಅವಶೇಷಗಳು ಪತ್ತೆಯಾಗಿವೆ ಎನ್ನಲಾಗಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನಿರ್ದೇಶನದಂತೆ ರಚಿಸಲಾದ ಸಮಿತಿಯಲ್ಲಿ CPCB, KKSPCB, FSSAI ಮತ್ತು ಕೃಷಿ ವಿಶ್ವವಿದ್ಯಾಲಯದ ಸದಸ್ಯರು ಭಾಗಿಯಾಗಿದ್ದರು.

ನೆಲಮಂಗಲ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಗಳ ಜೊತೆಗೆ ರಾಜಾಜಿನಗರ ಮಾರುಕಟ್ಟೆ, ಹಾಪ್ಕಾಮ್ಸ್ ಹಾಗೂ ಎಪಿಎಂಸಿಗಳಿಂದ ಒಟ್ಟು 72 ತರಕಾರಿ ಮಾದರಿಗಳನ್ನು ಸಂಗ್ರಹಿಸಿ FSSAI ಅನುಮೋದಿತ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಯಿತು. ಜೊತೆಗೆ 13 ಸ್ಥಳಗಳಿಂದ 26 ಮಣ್ಣು ಮಾದರಿಗಳನ್ನೂ ಪರಿಶೀಲಿಸಲಾಯಿತು.

ಪರೀಕ್ಷೆಯಲ್ಲಿ ಪತ್ತೆಯಾದ ಅಂಶಗಳು
- 72 ತರಕಾರಿ ಮಾದರಿಗಳಲ್ಲಿ 11 ಬಗೆಯ ವಿಷಕಾರಿ ಅಂಶ ಹಾಗೂ 230 ಕೀಟನಾಶಕ ಅವಶೇಷಗಳು ಪತ್ತೆ
- 19 ತರಕಾರಿ ಮಾದರಿಗಳಲ್ಲಿ FSSAI ಮಿತಿಗಿಂತ ಹೆಚ್ಚು ಸೀಸದ ಪ್ರಮಾಣ
- 26 ಮಣ್ಣು ಮಾದರಿಗಳಲ್ಲಿ 23 ಮಾದರಿಗಳು ಮಾಲಿನ್ಯಗೊಂಡಿರುವುದು ಬೆಳಕಿಗೆ
- 12 ಕೀಟನಾಶಕಗಳ ಅವಶೇಷಗಳು ಹೆಚ್ಚಾಗಿ ಪತ್ತೆ
- ಬದನೆಕಾಯಿ, ಹೀರೇಕಾಯಿ, ಕ್ಯಾಪ್ಸಿಕಂ, ಸೌತೆಕಾಯಿ, ಬೀನ್ಸ್ನಲ್ಲಿ ಸೀಸದ ಅಂಶ
- ಮಣ್ಣಿನಲ್ಲಿ ತಾಮ್ರ, ಸೀಸ, ಸತು ಹಾಗೂ ಕಬ್ಬಿಣದ ಅಂಶ ಪತ್ತೆ
- ಅಂತರ್ಜಲದಲ್ಲಿ ಸೀಸದ ಅಂಶ ಪತ್ತೆಯಾಗಿಲ್ಲ

ಯಾವ ತರಕಾರಿಗಳು ಹೆಚ್ಚು ಅಪಾಯಕರ?
- ಬದನೆಕಾಯಿ – 20 ಪಟ್ಟು ಹೆಚ್ಚು ಸೀಸ
- ತೊಂಡೆಕಾಯಿ – 18 ಪಟ್ಟು ಹೆಚ್ಚು
- ಅವರೆಕಾಯಿ – 9 ಪಟ್ಟು ಹೆಚ್ಚು
- ಸೊಪ್ಪುಗಳು, ಕೋಸು – 5 ಪಟ್ಟು ಹೆಚ್ಚು
ಮಲಿನವಾಗಿರುವ ಇತರೆ ತರಕಾರಿಗಳು:
ಸೌತೆಕಾಯಿ, ಹೀರೇಕಾಯಿ, ಕ್ಯಾಪ್ಸಿಕಂ, ಬೀಟ್ರೂಟ್, ಹಾಗಲಕಾಯಿ, ಚಿಲ್ಲಿ ಬಜ್ಜಿ, ಶುಂಠಿ
ಆರೋಗ್ಯದ ಮೇಲೆ ಪರಿಣಾಮ
- ನರಮಂಡಲ ಹಾನಿ
- ಮಕ್ಕಳಲ್ಲಿ ಬುದ್ಧಿಮತ್ತೆ ಕುಸಿತ
- ಮೂತ್ರಪಿಂಡ ಸಮಸ್ಯೆಗಳು
- ರಕ್ತದೊತ್ತಡ ಸಮಸ್ಯೆಗಳು
ಸಾರ್ವಜನಿಕರಿಗೆ ಸಲಹೆಗಳು
- ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ
- ಉಪ್ಪು ನೀರಿನಲ್ಲಿ ಕೆಲಕಾಲ ನೆನೆಸಿಡಿ
- ಸಿಪ್ಪೆ ತೆಗೆಯಬಹುದಾದ ತರಕಾರಿಗಳಲ್ಲಿ ಸಿಪ್ಪೆ ತೆಗೆದು ಬಳಸಿ
ಸಿಪಿಸಿಬಿ ವರದಿ ರಾಜ್ಯದಾದ್ಯಂತ ಆತಂಕ ಮೂಡಿಸಿದ್ದು, ಸಂಬಂಧಿತ ಇಲಾಖೆಗಳಿಂದ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬರುತ್ತಿದೆ.
ಇದನ್ನೂ ಓದಿ : ಸಭೆ–ಕಾರ್ಯಕ್ರಮಗಳಿಗೆ ಗುತ್ತಿಗೆ ನೀಡಲು ಚಿಂತನೆ.. ಭಾರಿ ಆಕ್ರೋಶ! ಫ್ರೀಡಂ ಪಾರ್ಕ್ ಫ್ರೀಡಂ ಕಸಿದುಕೊಳ್ತಿದೆಯಾ GBA ಕೇಂದ್ರ ಪಾಲಿಕೆ?



















