ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಉಂಟಾದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರಾಜಭವನ ಚಲೋ ನಡೆಯಿತು.
ಈ ವೇಳೆ ಮಾತನಾಡಿರುವ ವಾಟಾಳ್ ನಾಗರಾಜ್, ದುರಂತದಲ್ಲಿ 11 ಸಾವುಗಳಾಗಿವೆ. ಇದಕ್ಕೆ ಯಾರು ಕಾರಣ ಅನ್ನೋದನ್ನ ಹೇಳಬೇಕು? ಮಕ್ಕಳ ಸಮಾಧಿ ಮುಂದೆ ಹೆತ್ತವರ ಕಣ್ಣೀರು ಕರುಳು ಕಿವುಚುವಂತಿದೆ. ಸರ್ಕಾರದ ಅನೇಕರು ಹಲವು ರೀತಿ ಮಾತನಾಡುತ್ತಿದ್ದಾರೆ. ಇಲ್ಲಿ 11 ಜನ ಸತ್ತಿದ್ದಾರೆ, ಕುಂಭಮೇಳದಲ್ಲಿ ಸತ್ತಿಲ್ವಾ? ಗಂಗಾ ನದಿಯಲ್ಲಿ ಸತ್ತಿಲ್ವಾ ಅಂತಾರೆ. ಣದು ಮಾತನಾಡುವ ಮಾತಾ? ಎಂದು ಕಿಡಿಕಾರಿದ್ದಾರೆ.
ನನಗೆ ಸಿದ್ದರಾಮಯ್ಯ ಅವರ ಬಗ್ಗೆ ಗೌರವವಿದೆ. ಆದರೆ, ಅವರ ಸುತ್ತಮುತ್ತ ಯಾರಿದ್ದಾರೆ ಎಂಬುವುದನ್ನು ಅವರು ಗಮನಿಸಬೇಕು. ನಿಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ ಎಂದಿದ್ದಾರೆ.
ಇತಿಹಾಸದಲ್ಲೇ ಪೊಲೀಸ್ ಕಮಿಷನರ್ ರನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡುವುದರ ಮೂಲಕ ಅಗೌರವ ತೋರಿಸಿದ್ದಾರೆ. ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯ ಕುಗ್ಗಿಸಿದ್ದಾರೆ. ಪೊಲೀಸ್ ಇಲಾಖೆಗೆ ಸರ್ಕಾರ ಅಗೌರವ ತೋರಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೃತರ ಕುಟುಂಬಸ್ಥರಿಗೆ 5 ಕೋಟಿ ರೂ. ಪರಿಹಾರ ನೀಡಬೇಕು. ಕರ್ನಾಟಕ ಸರ್ಕಾರ, ಬಿಸಿಸಿಐ, KSCA ಸೇರಿಕೊಂಡು ಪರಿಹಾರ ನೀಡಬೇಕು.