ಬೆಂಗಳೂರು : ಬ್ಯಾಂಕ್ ಖಾತೆ ಓಪನ್ ಮಾಡುವುದರಿಂದ ಹಿಡಿದು ಪ್ರತಿಯೊಂದು ಚಟುವಟಿಕೆಗಳಿಗೆ ಈಗ ಆಧಾರ್ ಕಾರ್ಡ್ ನೀಡುವುದು ಅಗತ್ಯವಾಗಿದೆ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರವು ಇತ್ತೀಚೆಗೆ ಹೊಸ ಆಧಾರ್ ಆ್ಯಪ್ (Aadhaar) ಆ್ಯಪ್ ಬಿಡುಗಡೆ ಮಾಡಿದೆ. ಇದರ ಮೂಲಕ ಜನ ಸುಲಭವಾಗಿ ಆಧಾರ್ ದೃಢೀಕರಣ ಮಾಡುವ ಜತೆಗೆ ಸೈಬರ್ ಸುರಕ್ಷತೆಯ ಲಾಭವನ್ನೂ ಪಡೆಯಬಹುದಾಗಿದೆ.
ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರು ಕೂಡ ಹೊಸ ಆಧಾರ್ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಒಟಿಪಿ ಆಧಾರಿತ ವಂಚನೆ, ಸೈಬರ್ ವಂಚನೆಗಳನ್ನು ತಡೆಯಲು ಹೊಸ ಆ್ಯಪ್ ಸಹಕಾರಿಯಾಗಿದೆ. ಡಿಜಿಟಲ್ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಮೊಬೈಲ್ ಮೂಲಕವೇ ಸಾರ್ವಜನಿಕರು ಇನ್ನು ಆಧಾರ್ ದೃಢೀಕರಣ ಮಾಡಬಹುದಾಗಿದೆ. ಭೌತಿಕ ಆಧಾರ್ ಕಾರ್ಡ್, ಜೆರಾಕ್ಸ್ ಕಾಪಿ ಇಟ್ಟುಕೊಳ್ಳುವ ಅವಶ್ಯಕತೆಯನ್ನೇ ಇದು ರದ್ದುಗೊಳಿಸಿದೆ. ಒಂದು ಮೊಬೈಲ್ ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡರೆ ಸಾಕು, ಯಾವಾಗ, ಎಲ್ಲಿ ಬೇಕಾದರೂ ಆಧಾರ್ ದೃಢೀಕರಣ ಮಾಡಿಕೊಳ್ಳಬಹುದಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ತಿಳಿಸಿದೆ.
ಆ್ಯಪ್ನಿಂದ ಹಲವು ಅನುಕೂಲ
ಆಧಾರ್ ಕಾರ್ಡ್ ಗಾಗಿಯೇ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಆ್ಯಪ್ ಹಲವು ರೀತಿಯಲ್ಲಿ ಅನುಕೂಲಕರವಾಗಿದೆ. ಹೋಟೆಲ್ ಗಳಲ್ಲಿ ಈ ಆ್ಯಪ್ ಮೂಲಕವೇ ಚೆಕ್-ಇನ್ ಆಗಬಹುದು. ಅಂದರೆ, ಈ ಆ್ಯಪ್ ಮೂಲಕ ಆಧಾರ್ ದೃಢೀಕರಣ ಮಾಡಿಕೊಳ್ಳಬಹುದು. ಹಾಸ್ಪಿಟಲ್ ವಿಸಿಟರ್ ಆ್ಯಕ್ಸೆಸ್, ಗಿಗ್ ವರ್ಕರ್ ಗಳು ವೇರಿಫಿಕೇಶನ್ ಮಾಡಲು, ಫೇಸ್ ವೇರಿಫಿಕೇಶನ್ ಕೂಡ ಈ ಆ್ಯಪ್ ನಲ್ಲಿ ಲಭ್ಯವಿದೆ.
ಇದನ್ನೂ ಓದಿ : ಕಾಡಾನೆ ಅಟ್ಟಹಾಸಕ್ಕೆ ದನದ ಕೊಟ್ಟಿಗೆ ಧ್ವಂಸ!



















