ಉಡುಪಿ: ಕಾಂಗ್ರೆಸ್ ಮುಖಂಡ ಕಾಪುವಿನ ದಿವಾಕರ್ ಶೆಟ್ಟಿ ಮನೆಯಲ್ಲಿ ತಡರಾತ್ರಿ ದರೋಡೆಯಾಗಿದೆ. ಬಾಗಿಲನ್ನು ಒಡೆದು ಕಳ್ಳರು ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.
ಕುಟುಂಬ ಸಮೇತರಾಗಿ ದಿವಾಕರ್ ಶೆಟ್ಟಿ ಮುಂಬೈಗೆ ಹೋಗಿದ್ದರು. ಮನೆ ಕಾವಲಿಗಾಗಿ ಇದ್ದ ವ್ಯಕ್ತಿ ಮೇಲ್ಮಹಡಿಯಲ್ಲಿ ಮಲಗಿದ್ದಾಗ ಕಳ್ಳರು ಬಾಗಿಲೊಡೆದು ಮನೆಯೊಳಗೆ ನುಗ್ಗಿ ತಮ್ಮ ಕೈ ಚಳಕ ತೋರಿದ್ದಾರೆ.
ಎರಡು ದಿನದ ಹಿಂದೆ ಹತ್ತಿರದ ಪಡುಬಿದ್ರಿಯಲ್ಲಿ ಕಳ್ಳತನವಾಗಿತ್ತು. ಸರಿ ಸುಮಾರು 50 ಲಕ್ಷ ಮೌಲ್ಯದ ಚಿನ್ನವನ್ನು ಕಳ್ಳರು ಎಗರಿಸಿದ್ದರು. ಸದ್ಯ ಉಡುಪಿ ಸುತ್ತಮುತ್ತ ಒಂದರ ಮೇಲೆ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದು, ಭಯದ ವಾತಾವರಣ ಸೃಷ್ಟಿಸಿದೆ.
ಇದನ್ನೂ ಓದಿ : ಫೆ.1ರಂದು ಪುತ್ತೂರಿನಲ್ಲಿ ‘ಕೋಳಿ ಅಂಕ’ಕ್ಕಾಗಿ ಹೋರಾಟ | ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ



















