ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡಗೆ ದೊಡ್ಡ ಸಂಕಷ್ಟ ಎದುರಾಗಿದೆ. ನಟನ ಆ ಒಂದು ಹೇಳಿಕೆಯೇ ಈಗ ಬುಡಕಟ್ಟು ಜನಾಂಗದ ವಕ್ರದೃಷ್ಠಿಗೆ ಕಾರಣವಾಗಿದೆ.
ಮೊನ್ನೆ ಹೈದ್ರಾಬಾದ್ ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಪಹಲ್ಗಾಮ್ ವಿಚಾರವಾಗಿ ದೇವರಕೊಂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪಾಕಿಸ್ತಾನಿಗಳ ವಿರುದ್ಧ ಭಾರತ ಯುದ್ಧ ಮಾಡುವುದು ಬೇಡ. ಅಲ್ಲಿನ ಜನರೇ ಆ ಸರ್ಕಾರದ ವಿರುದ್ಧ ಬೇಸತ್ತು ಹೋಗಿದ್ದಾರೆ. ಇದೇ ವರ್ತನೆ ಮುಂದುವರಿದರೆ ಅಲ್ಲಿನ ಜನರೇ ದಂಗೆ ಏಳ್ತಾರೆ. ಯಾಕೆಂದ್ರೆ ಅಲ್ಲಿನ ಸರ್ಕಾರ ನಿಜಕ್ಕೂ 500 ವರ್ಷಗಳ ಹಿಂದಿನ ಬುಡಕಟ್ಟು ಜನರು ವರ್ತಿಸಿದಂತೆ ವರ್ತಿಸುತ್ತಿದೆ. ಅವರಿಗೆ ಅಲ್ಪ ಸಾಮಾನ್ಯ ಜ್ಞಾನವೂ ಇಲ್ಲದಂತಿದೆ ಎಂದಿದ್ದರು.
ಈ ಹೇಳಿಕೆ ವಿರುದ್ಧ ಕಣ್ಣು ಕೆಂಪಗಾಗಿಸಿರುವ ಬುಡಕಟ್ಟು ಸಮುದಾಯ ನಟನ ವಿರುದ್ಧ ಎಸ್ಸಿ-ಎಸ್ಪಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಅಂತಾ ಆಗ್ರಹಿಸಿದೆ. ದೇವರಕೊಂಡರ ಹೇಳಿಕೆ ಒಂದು ಸಮುದಾಯವನ್ನು ಗುರಿಯಾಗಿಸಿ ನೋವನ್ನುಂಟು ಮಾಡುವ ಭಾವನೆ ಹೊಂದಿದೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಹೈದರಾಬಾದ್ ನ ಸಂಜೀವ್ ರೆಡ್ಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.