ವಿಜಯಪುರ : ರಾಜ್ಯದಲ್ಲಿ ಪ್ರತಿಭಟನೆ ಮಾಡುವವರು ದೇಶದ್ರೋಹಿಗಳು, ನಾಲಾಯಕರು, ಅಲ್ಲಿನ ಘಟನೆಗೂ ಇಲ್ಲಿಗೂ ಏನು ಸಂಬಂಧ? ಭಾರತದಲ್ಲಿ ಆರಾಮಾಗಿದ್ದಾರೆ. ಆರಾಮಾಗಿ ಇರಿ. ಅಲ್ಲಿ ಸತ್ತಿದಕ್ಕೆ ಇಲ್ಲಿ ಯಾಕೆ ಹೋರಾಟ ಮಾಡುತ್ತಿರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಇರಾನ್ನಲ್ಲಿ ಖಮೇನಿ ಸಾವಿಗೆ ರಾಜ್ಯದಲ್ಲಿ ಶೋಕಾಚರಣೆ, ಪ್ರತಿಭಟನೆ ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಭಾರತ ಎಲ್ಲಾ ದೇಶಗಳ ಜೊತೆಗೆ ಉತ್ತಮ ಸಂಬಂಧ ಹೊಂದಿದೆ. ಈ ಯುದ್ದದಲ್ಲಿ ನಮ್ಮದೇನು ಪಾತ್ರವಿಲ್ಲ. ನಾವು ಶಾಂತಿ ಬಯಸುತ್ತೇವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿಯಾದಾಗ ಯಾಕೆ ಹೋರಾಟ ಮಾಡಲಿಲ್ಲ. ಪೆಹ್ಲಗಾಂನಲ್ಲಿ ಹಿಂದೂಗಳ ಕೊಲೆಯಾದಾಗ ಯಾಕೆ ಕಣ್ಣಿರು ಬರೋದಿಲ್ಲ. ನಿಮಗೆ ಈ ದೇಶಕ್ಕೆ ನಿಷ್ಟೆ ಇಲ್ಲ. ಈ ದೇಶದ ಅನ್ನ ತಿಂದು ನೀರು ಕುಡಿದು ಯಾವುದೋ ದೇಶದಲ್ಲಿ ಸತ್ರೆ ಇಲ್ಲಿ ಯಾಕೆ ಪ್ರತಿಭಟನೆ ಮಾಡುತ್ತೀರ ಎಂದು ಕಿಡಿಕಾರಿದ್ದಾರೆ.
ಪ್ರತಿಭಟನೆ ಮಾಡುವವರ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಿಯಾಂಕ ಖರ್ಗೆ ಉತ್ತರ ಕೊಡಬೇಕು. ಭಾರತದಲ್ಲಿ ಪ್ರತಿಭಟನೆ ಮಾಡಿ ಶಾಂತಿ ಕದಡಬಾರದು, ಒಂದು ವೇಳ ಮಾಡಿದರೆ ಅವರ ಮೇಲೆ ಗುಂಡಿನ ದಾಳಿ ಮಾಡಿಸಬೇಕು. ಇವರು ದೇಶದ್ರೋಗಿಗಳು, ದೇಶಪ್ರೇಮಿಗಳಲ್ಲ ಎಂದಿದ್ದಾರೆ.
ಇದನ್ನೂ ಓದಿ : ಭೂಮಿಯ ಹಕ್ಕಿಗಾಗಿ ಮುಳುಗಡೆ ಸಂತ್ರಸ್ಥರ ಹೋರಾಟ | ನೂತನ ಸಿಗಂದೂರು ಸೇತುವೆ ಬಂದ್ ಮಾಡಿ ಪ್ರೊಟೆಸ್ಟ್!



















