ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಗುಂಡಿಗಳದ್ದೇ ಹಾವಳಿ, ಈ ಗುಂಡಿಯಿಂದ ಈಗಾಗಲೇ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ. ಇದೀಗ ಬಿಬಿಎಂಪಿ ವಾರ್ಡ್ 83 ಕಾಡುಗೋಡಿ ಬಳಿ ನಿನ್ನೆ ಸುರಿದ ಭಾರಿ ಮಳೆಗೆ ರಸ್ತೆ ನಡುವೆ ಬೃಹತ್ ಗುಂಡಿ ಸೃಷ್ಟಿಯಾಗಿದೆ. ಹೌದು, ರಸ್ತೆ ಮದ್ಯದಲ್ಲಿ ಮಣ್ಣು ಕುಸಿದು ಗುಂಡಿ ಬಿದ್ದ ಹಿನ್ನೆಲೆ
ವಾಹನ ಸವಾರರು ಪರದಾಡಿದ್ದಾರೆ.
ಕೊಂಚ ಎಚ್ಚರ ತಪ್ಪಿದ್ರು ಗುಂಡಿಯಿಂದ ಅನಾಹುತ ಕಟ್ಟಿಟ್ಟಬುತ್ತಿ ಈ ನಡುವೆ ಸ್ಥಳೀಯರೇ ಗುಂಡಿಗೆ ಮಣ್ಣು ಮುಚ್ಚುಲು ಮುಂದಾಗಿದ್ದಾರೆ. ಇನ್ನು ಸ್ಥಳಿಯರ ಈ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲಾಗ್ತಿದ್ದು, ಬಿಬಿಎಂಪಿಗೆ ಟ್ಯಾಗ್ ಮಾಡಿ ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ.