ಬೆಂಗಳೂರು | ಸಿಎಂ ಸಿದ್ದರಾಮಯ್ಯ ಇಂದು17 ನೇ ಬಜೆಟ್ ಮಂಡಿಸಿದ್ದಾರೆ. ಇದು ಕೇವಲ ಅವರಿಗೆ ಮಾತ್ರ ಸಮಾಧಾನ ತಂದಿದೆ. ಇದು ರಾಜ್ಯಕ್ಕೆ ನಿರಾಶದಾಯಕ ಬಜೆಟ್ ಆಗಿದ್ದು, ಜನರ ಅಪೇಕ್ಷೆಯಲ್ಲಾ ನಿರಾಸೆಯಾಗಿದೆ ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಅಶ್ವಥ್ ನಾರಾಯಣ್, 2026ರ ಬಜೆಟ್ನಲ್ಲಿ ಗುಣಮಟ್ಟದ ಶಿಕ್ಷಣ, ಆರೋಗ್ಯ, ದೀನದಲಿತರಿಗೆ ಅನುಕೂಲವಾಗಿಲ್ಲಾಇದು ಕೇವಲ ಭರವಸೆಗಳ ಭಾಷಣ ಎಂದು ತಿಳಿಸಿದ್ದಾರೆ.
ಬಜೆಟ್ನಲ್ಲಿ ಆರ್ಥಿಕ ಕೊರತೆ ಆಗಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಆರ್ಥಿಕ ಸಚಿವರಾಗಿ ಬಹಳಷ್ಟು ಅನುಭವಿ ಇದ್ದಾರೆ. ಆದರೂ ಕೊರತೆ ಬಜೆಟ್ ಮಂಡನೆ ಮಾಡಿ, 4.40 ಕೋಟಿ ಸಾಲ ಮಾಡಿ ಸಾಲದ ಹೊರೆಯನ್ನು ಹೆಚ್ಚಿಸಿದ್ದಾರೆ ಎಂದಿದ್ದಾರೆ.
ಗ್ಯಾರಂಟಿಗಳಿಂದ ಹಣ ಹೊರೆಯಾಗಿದ್ಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕನಿಷ್ಠ ಆರೋಗ್ಯದ ಗ್ಯಾರಂಟಿ ಕೂಡ ಕೊಟ್ಟಿಲ್ಲಾ. ಔಷಧಿಗಳನ್ನ ಕೊಡ್ತಿಲ್ಲಾ, ಟೆಂಡರ್ ಅಗಿಲ್ಲಾ, ಉದ್ಯೋಗ, ಕಾನೂನು ಸುರಕ್ಷತೆ ಕೊಟ್ಟಿಲ್ಲಾ ಗ್ಯಾರಂಟಿ ಹೆಸರಿನಲ್ಲಿ ಕೆಲವು ಯೋಜನೆಗಳನ್ನ ಕೊಟ್ಟು, ಎಲ್ಲಾ ಇಲಾಖೆಗಳಲ್ಲೂ ಅಭಿವೃದ್ಧಿ ವಿಫಲವಾಗಿದೆ. ಗೃಹ ಲಕ್ಷ್ಮಿ ಯೋಜನೆಯಲ್ಲಿ ಕೆಲ ತಿಂಗಳ ಹಣ ಕೊಟ್ಟಿಲ್ಲಾ. ನುಡಿದಂತೆ ನಡೆಯಲು ಸರ್ಕಾರ ವಿಫಲ ಆಗಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ : ಉರ್ದು ಶಾಲೆಗಳ ಅಭಿವೃದ್ಧಿಗೆ 400 ಕೋಟಿ ಅನುದಾನ ಘೋಷಣೆ.. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಭಾಗ್ಯ!


















