ಕೊಪ್ಪಳ | ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ ತಿಳಿಸಿದ್ದಾರೆ. ಎಲ್ಲಾ ಬಂಕ್ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ, ವಾಹನ ಸವಾರರು ಬಂಕ್ಗಳಲ್ಲಿ ಹೆಚ್ಚು ಇಂಧನ ತುಂಬಿಸಿಕೊಂಡು ಕೆಲವು ಸ್ಥಳಗಳಲ್ಲಿ ತಾತ್ಕಾಲಿಕ ಸಮಸ್ಯೆ ಉಂಟಾಗಿದೆ. ಈ ಸಂಬಂಧ ಬಂಕ್ ಮಾಲೀಕರೊಂದಿಗೆ ಮಾತುಕತೆ ನಡೆದಿದ್ದು, ಸಮಸ್ಯೆ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಾಗೆಯೇ ಅಡುಗೆ ಅನಿಲಕ್ಕೂ ಜಿಲ್ಲೆಯಲ್ಲಿ ಕೊರತೆ ಇಲ್ಲ, ಮನೆ ಮನೆಗೆ ಗೃಹಬಳಕೆ ಅನಿಲ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಸ್ಥಳಗಳಲ್ಲಿ ಗ್ರಾಹಕರು ಎಜೆನ್ಸಿಗಳತ್ತ ಬಂದಿದ್ದರು. ಆದರೆ, ಆಹಾರ ಇಲಾಖೆ ಮೂಲಕ ಮಾಹಿತಿ ನೀಡಿ ಸಮಸ್ಯೆ ಶೀಘ್ರ ಪರಿಹಾರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು, ಬಿಸಿಯೂಟ, ಹಾಸ್ಟೆಲ್, ಆಸ್ಪತ್ರೆ, ಅಂಗನವಾಡಿ ಕೇಂದ್ರಗಳಿಗೆ ಅಡುಗೆ ಅನಿಲ ಯಾವುದೇ ಸಮಸ್ಯೆಯಿಲ್ಲದೆ ಸರಬರಾಜು ಆಗುತ್ತಿದೆ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ ತಿಳಿಸಿದ್ದಾರೆ.
ಇದನ್ನೂ ಓದಿ : ಪೆಟ್ರೋಲ್ ಅಬಕಾರಿ ಸುಂಕ ಇಳಿಕೆಯಾದರೂ ಗ್ರಾಹಕರಿಗಿಲ್ಲ ಲಾಭ?


















