ಬೆಂಗಳೂರು: ಜಮ್ಮು ಕಾಶ್ಮೀರ ದಾಳಿಯನ್ನು ಮಾಜಿ ಸಿಎಂ ಸದಾನಂದ ಗೌಡ ತೀವ್ರವಾಗಿ ಖಂಡಿಸಿದ್ದಾರೆ.
ಭಯೋತ್ಪಾದಕರ ದಾಳಿಗೆ ಬಲಿಯಾದ ಭರತ್ ಭೂಷಣ್ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದೇವರು ದುಃಖ ತಡೆಯುವ ಶಕ್ತಿ ನೀಡಲಿ. ಈ ರೀತಿ ಹೇಳುವುದು ಸುಲಭ. ಆದರೆ, ಅನುಭವಿಸುವುದು ಕಷ್ಟ. ದೇಶದ ಪ್ರಧಾನಿ ಮಂತ್ರಿ ಈ ದುಷ್ಕೃತ್ಯದ ಹಿಂದೆ ಇರುವ ಪಾಕಿಸ್ತಾನಕ್ಕೆ ತಕ್ಕಶಾಸ್ತಿ ಮಾಡಲಿದ್ದಾರೆ. ಇಂತಹ ಕೃತ್ಯವನ್ನು ಪಾಕಿಸ್ತಾನ ಮಾಡಿದೆ.
ಅರ್ಟಿಕಲ್ 370ರ ರದ್ದಿನ ನಂತರ ಎಲ್ಲವೂ ಹತೋಟಿಗೆ ಇತ್ತು. ಪ್ರವಾಸದಿಂದ ಅಲ್ಲಿನ ಜನರಿಗೆ ಆರ್ಥಿಕ ಅನುಕೂಲ ಆಗಿತ್ತು. ಇದಕ್ಕೆ ಸವಾಲು ಹಾಕುವ ಕೆಲಸ ಮಾಡಿದ್ದಾರೆ. ಇದಕ್ಕೆ ತಕ್ಕ ಉತ್ತರ ನಮ್ಮ ಆಡಳಿತ ಕೊಟ್ಟೆ ಕೊಡುತ್ತೆ.
ಪಾಕ್ ಜೊತೆ ಎಲ್ಲಾ ಸಂಬಂಧ ನಾವು ಕಳೆದುಕೊಂಡಿದ್ದೇವೆ. ಅದರಿಂದ ಅವರು ದೊಡ್ಡ ತೊಂದರೆ ಅನುಭವಿಸಲಿದ್ದಾರೆ. ಇವರ ಬಲಿದಾನ ಸುವ್ಯವಸ್ಥಿತ ಕಾಶ್ಮೀರ ಮಾಡಲು ನಾಂದಿ ಆಗುತ್ತೆ. ಹೊಡಿಬೇಡಿ ಅಂದರು ಪಾಪಿಗಳು ಮತ್ತೆ ಮತ್ತೆ ಗುಂಡು ಹೊಡೆದಿದ್ದಾರೆ. ಅಂತಹ ಪಾಪಿಗಳಿಗೆ ಉಗ್ರ ಶಿಕ್ಷೆಯಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.