ವಿಜಯಪುರ: ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.

ಮುದ್ದೇಬಿಹಾಳ ಪಟ್ಟಣದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ನಿವೃತ್ತ ಯೋಧ ಕ್ಷತ್ರಿ ಎಂಬುವವರ ಗಮನ ಬೇರೆಡೆ ಸೆಳೆದು ಎರಡುವರೆ ತೊಲೆ ಚೈನ್, ಎಂಟು ಗ್ರಾಂ ಉಂಗುರ ದೋಚಿ ಖದೀಮರು ಪರಾರಿಯಾಗಿದ್ದಾರೆ.
ಖದೀಮರು ತಮ್ಮನ್ನು ತಾವು ಪೊಲೀಸರು ಎಂದು ಪರಿಚಯಿಸಿಕೊಳ್ಳುವ ಮೂಲಕ ಮುಂದೆ ಕಳ್ಳರಿದ್ದಾರೆ. ನಿಮ್ಮ ಚಿನ್ನಾಭರಣ ಮುಚ್ಚಿಟ್ಟುಕೊಳ್ಳಿ ಎಂದು, ತಾವೇ ಒಂದು ಪೇಪರ್ ತುಣುಕು ನೀಡಿ ಇದರಲ್ಲಿ ಮುಚ್ಚಿಡಿ ಎಂದಿದ್ದಾರೆ. ಆನಂತರ ತಾವೇ ಪ್ಯಾಕ್ ಮಾಡಿದಂತೆ ನಾಟಕವಾಡಿ ಪರಾರಿಯಾಗಿದ್ದಾರೆ.

ಆನಂತರ ಪೇಪರ್ ಬಿಚ್ಚಿ ನೋಡಿದಾಗ ಅಲ್ಲಿ ಚಿನ್ನದ ಬದಲಾಗಿ ಕಲ್ಲಿನ ಚೂರುಗಳು ಇರುವುದು ಪತ್ತೆಯಾಗಿದೆ. ಹೀಗೆ ಕಳೆದ ಎರಡು ತಿಂಗಳ ಹಿಂದೆ ಆದರ್ಶ ನಗರದಲ್ಲಿ ವೃದ್ದೆಯನ್ನು ಯಾಮಾರಿಸಲಾಗಿತ್ತು. ಸ್ಥಳೀಯರ ಮೊಬೈಲ್ ನಲ್ಲಿ ಈ ದೃಶ್ಯ ಸೆರೆಯಾಗಿತ್ತು. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲ ವೈರಲ್ ಆಗಿದೆ. ಈ ಘಟನೆ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.