ಬೆಂಗಳೂರು: “ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಚಲನಚಿತ್ರದ ಮೂರನೇ ಲಿರಿಕಲ್ ವಿಡಿಯೋ ಹಾಡು ಇತ್ತೀಚೆಗೆ ವಿಜಯಪುರ ಜಿಲ್ಲೆಯ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಬಿಡುಗಡೆಯಾಯಿತು.
ಪಂಚ ಋಷಿಗಳ ಪುಣ್ಯ ಸ್ಮರಣೋತ್ಸವದ ಮಾಘ ಸಪ್ತಾಹದ ಕಾರ್ಯಕ್ರಮದಲ್ಲಿ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರು ಬಿಡುಗಡೆ ಮಾಡಿದರು. “ಜಯಪರಮಹಂಸ ಗುರುಪರಮಹಂಸ” ಲಿರಿಕಲ್ ಹಾಡನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ನಿರ್ಮಾಪಕ ಮಾಧವಾನಂದ, ನಿರ್ದೇಶಕ ರಾಜರವಿಶಂಕರ್, ರವಿನಾರಾಯಣ್, ಸಂಕಲನಕಾರ ಆರ್.ಡಿ. ರವಿ, ಪ್ರಕಾಶ ಕಾಲತಿಪ್ಪಿ, ನಟ ವಿಶ್ವಪ್ರಕಾಶ್ ಮಲಗೊಂಡ, ಮಹಾದೇವ ಮಹಾರಾಜರು ಭೂಕೈಲಾಸ ಮಂದಿರ ನಂದಗಾಂವ, ಹಣಮಂತಪ್ಪ ಮಹಾರಾಜರು ಕಲ್ಮೇಶ್ವರ ಆಶ್ರಮ ಶೇಗುಣಸಿ, ಮುಕುಂದ ಬೆಳಗಲಿ ಬೆಂಗಳೂರು, ಸುಶೀಲ್ ಬೆಳಗಲಿ ಸೇರಿದಂತೆ ಹಲವರು ಇದ್ದರು. ಗಿರಿಮಲ್ಲೇಶ್ವರ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಸದ್ಗುರು ಪ್ರಭುಜೀ ಮಹಾರಾಜರ ಮಾರ್ಗದರ್ಶನದಲ್ಲಿ “ಮಾಧವಾನಂದ ಯೋ ಶೇಗುಣಸಿ” ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು ” “ಜಯಪರಮಹಂಸ ಗುರುಪರಮಹಂಸ” ಗುರುಭಜನೆಯ ಸಾಲುಗಳ ಈ ಹಾಡನ್ನು ಎ ಟಿ. ರವೀಶ್ ಗಾಯನದ ಜೊತೆಗೆ ಸಂಗೀತ ನೀಡಿದ್ದಾರೆ.
ಹೊಸ ಪ್ರತಿಭೆ ರವಿ ನಾರಾಯಣ್ ಶ್ರೀಸಂಗಮೇಶ್ವರರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟರಾದ ರಾಮಕೃಷ್ಣ, ವಿಜಯಕಾಶಿ, ವಿನಯಪ್ರಸಾದ್, ಸಂದೀಪ್ ಮಲಾನಿ, ನಾರಾಯಣ ಸ್ವಾಮಿ, ವಿಶ್ವಪ್ರಕಾಶ್ ಟಿ ಮಲಗೊಂಡ, ಭವ್ಯಶ್ರೀ ರೈ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಜಾ ರವಿಶಂಕರ್ (ವಿ ರವಿ) ನಿರ್ದೇಶನ, ಸಿ ನಾರಾಯಣ್ ಛಾಯಾಗ್ರಹಣ, ಎ.ಟಿ. ರವೀಶ್ ಸಂಗೀತ, ಡಿ. ರವಿ ಸಂಕಲನ, ಕುಮಾರ್ ನೊಣವಿನಕೆರೆ ಪ್ರಸಾದನ ಈ ಚಿತ್ರಕ್ಕಿದೆ.