ಮೈಸೂರು: ಹುಚ್ಚು ನಾಯಿ ಕಡಿತಕ್ಕೆ ಬಸವನಿಗೆ ಹುಚ್ಚು ಹಿಡಿದಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಮೇಟಗಳ್ಳಿಯಲ್ಲಿ ನಡೆದಿದೆ. ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಿಟ್ಟಿದ್ದ ಬಸವನಿಗೆ ನಾಯಿ ಕಡಿದಿದೆ. ನಾಯಿ ಕಡಿತದಿಂದಾಗಿ ರೇಬಿಸ್ ರೋಗ ಅಟ್ಯಾಕ್ ಆಗಿದೆ. ಹೀಗಾಗಿ ಬಸವನಿಗೆ ಹುಚ್ಚ ಹಿಡಿದಿದ್ದರಿಂದಾಗಿ ಬಸವ ರೋಧಿಸುತ್ತಿದ್ದಾನೆ. ಬಸವ ಸಾವು- ಬದುಕಿನ ಮಧ್ಯೆ ಹೋರಾಡುತ್ತಿರುವುದನ್ನು ಕಂಡು ಜನರು ಮಮ್ಮಲ ಮರಗುತ್ತಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಬಸವನಿಗೆ ಹುಚ್ಚು ನಾಯಿ ಕಡಿದಿತ್ತು.
ನಾಯಿ ಕಡಿತದ ನಂತರ ಗ್ರಾಮಸ್ಥರು ಚಿಕಿತ್ಸೆ ಕೊಡಿಸಿದ್ದರು. ಆದರೆ, ಬಸವ ಚಿಕಿತ್ಸೆಗೆ ಸ್ಪಂದಿಸದೆ ನರಳಾಡುತ್ತಿದ್ದಾನೆ. ಹೀಗಾಗಿ ಬಸವನನ್ನು ಕಟ್ಟಿ ಹಾಕಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ. ಒಂದು ವೇಳೆ ಬಸವ ಜನರ ಮೇಲೆ ದಾಳಿ ಮಾಡಿದರೆ, ಜನರಿಗೂ ರೋಗ ಹರಡುವ ಭಯ ಜನರನ್ನು ಕಾಡುತ್ತಿದೆ. ಹೀಗಾಗಿ ಗ್ರಾಮಸ್ಥರು ಬಸವನನ್ನು ಕಟ್ಟಿ ಹಾಕಿದ್ದಾರೆ. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.