ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯ್ತಿರೋ ವಿಷಯಕ್ಕೀಗ ತಾರ್ಕಿಕ ಉತ್ತರ ಸಿಕ್ಕಿದೆ.
ಹೌದು, ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿರೋ ರಾಕಿ ಬಾಯ್ ರಾಮಾಯಣ ಸೆಟ್ ಗೆ ಯಾವಾಗ ಎಂಟ್ರಿ ಕೊಡುತ್ತಾರೆ ಅನ್ನೋದಕ್ಕೀಗ ಉತ್ತರ ಸಿಕ್ಕಿದೆ. ದೇಶವೇ ಯಾಕೆ ಜಗತ್ತಿನ ಸಿನಿ ದುನಿಯಾವೇ ಎದುರು ನೋಡುತ್ತಿರುವು ಸಿನಿಮಾ ಅದು ರಾಮಾಯಣ.
ಲುಕ್ ಟೆಸ್ಟ್ ಓಕೆ, ಇನ್ನೇನಿದ್ರು ಶೂಟಿಂಗ್!
ನಿತಿನ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದರ ನಡುವೆ ನಿನ್ನೆಯಷ್ಟೇ ಚಿತ್ರದ ಪ್ರಮುಖ ಪಾತ್ರಧಾರಿಗಳ ಫೈನಲ್ ಲುಕ್ ಟೆಸ್ಟ್ ಕೂಡಾ ಓಕೆ ಆಗಿದೆ. ಮುಂಬೈನ ಫಿಲ್ಮ್ ಸಿಟಿಯಲ್ಲಿ ನಿನ್ನೆಯಷ್ಟೇ ರಾಮನ ಪಾತ್ರಧಾರಿ ರಣಬೀರ್ ಸಿಂಗ್ ಹಾಗೂ ಸೀತಾ ಮಾತೆ ಪಾತ್ರಧಾರಿ ಸಾಯಿ ಪಲ್ಲವಿ ಅಂತಿಮ ಲುಕ್ ಟೆಸ್ಟ್ ನೀಡಿದ್ದಾರೆ. ಅಷ್ಟೇ ಅಲ್ಲಾ ನಿರ್ದೇಶಕರು ಈ ಟೆಸ್ಟ್ ಗೆ ಓಕೆ ಕೂಡಾ ಅಂದಿದ್ದಾರೆ.
ದಸರಾ ಮುಗೀತಿದ್ದಂತೆ ರಾವಣನ ರಂಗಪ್ರವೇಶ!
ಸದ್ಯ ಟಾಕ್ಸಿಕ್ ಸಿನಿಮಾದ ಅಂತಿಮ ಹಂತದ ಚಿತ್ರೀಕರಣದಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಈ ಕೆಲಸಗಳನ್ನೆಲ್ಲಾ ಮುಗಿಸುತ್ತಿದ್ದಂತೆ ಯಶ್ ನೇರ ರಾಮಾಯಣಕ್ಕೆ ಎಂಟ್ರಿ ಪಡೀತಿದ್ದಾರೆ. ಸದ್ಯದ ಶೆಡ್ಯೂಲ್ ಪ್ರಕಾರ ದಸರಾ ಹಬ್ಬ ಮುಗೀತಿದ್ದಂತೆ ಯಶ್ ರಾವಣನ ಪಾತ್ರವನ್ನು ಆವರಿಸಿಕೊಳ್ಳಲಿದ್ದಾರೆ. ಈಗಾಗಲೇ ನಿರ್ದೇಶಕರೊಟ್ಟಿಗೆ ಚರ್ಚಿಸಿರೋ ಯಶ್ ರಾವಣನ ಪಾತ್ರಕ್ಕೆ ಅಗತ್ಯವಿರೋ ಪೂರ್ವ ತಯಾರಿಯನ್ನೂ ಆರಂಭಿಸಿದ್ದಾರೆ. ಅದ್ರಲ್ಲೂ ಪ್ರಮುಖವಾಗಿ ಯಶ್ ದೇಹ ದಂಡನೆ ಕಾರ್ಯ ಶುರುಮಾಡಿದ್ದಾರೆ. ಈ ನಡುವೆ, ರಾಮಾಯಣ ತಂಡಕ್ಕೆ ಭಾರತ ಸಿನಿ ರಂಗದ ಹತ್ತಾರು ಅತಿರಥ ನಾಯಕರ ಎಂಟ್ರಿ ಪಕ್ಕಾ ಆಗುತ್ತಿದೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ. ಉಳಿದಂತೆ ಮತ್ತಷ್ಟು ಪಾತ್ರಗಳ ಆಯ್ಕೆ ಕಾರ್ಯವೂ ಸಾಗಿದ್ದು ಶೀಘ್ರವೇ ಎಲ್ಲ ಮಾಹಿತಿಯೂ ಬಹಿರಂಗವಾಗಲಿದೆ.