ತೆಲಂಗಾಣ ಸರ್ಕಾರಕ್ಕೆ ಮೆಗಾಸ್ಟಾರ್ ಚಿರಂಜೀವಿ ಮನವಿ ಎಚ್ಚರಿಕೆ ನೀಡಿದ್ದಾರೆ.
ಚಿರಂಜೀವಿ, ರವಿತೇಜ ಒಟ್ಟಿಗೆ ನಟಿಸಿದ್ದ ‘ವಾಲ್ತೇರು ವೀರಯ್ಯ’ ಸಿನಿಮಾದ 200ನೇ ದಿನದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ‘ಚಿತ್ರರಂಗದವರ ಸಂಭಾವನೆ, ಸಿನಿಮಾ ಕಲೆಕ್ಷನ್ಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ‘ಸಿನಿಮಾಗಳು ಚೆನ್ನಾಗಿ ವ್ಯವಹಾರ ಮಾಡುತ್ತಿವೆ. ಆದ್ದರಿಂದ ಹೆಚ್ಚು ಹೆಚ್ಚು ಸಿನಿಮಾ ಮಾಡುತ್ತಿದ್ದೇವೆ. ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಿದ್ದೇವೆ. ಹೆಚ್ಚು ಸಿನಿಮಾ ಮಾಡಲು ಮೂಲಕ ಹೆಚ್ಚಿನ ಜನರಿಗೆ ಉದ್ಯೋಗ ಸಹ ಕೊಡುತ್ತಿದ್ದೇವೆ’. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಏಕೆ ಬಿಡುತ್ತೀರಿ. ಮಾತನಾಡಲು ಹಲವಾರು ಸಮಸ್ಯೆಗಳಿವೆ.
ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕೊಡಿಸುವ ವಿಚಾರ, ನಿಂತುಹೋಗಿರುವ ಪ್ರಾಜೆಕ್ಟ್ಗಳು, ಬಡವರ ಹೊಟ್ಟೆ ತುಂಬಿಸುವ ಯೋಜನೆಗಳು, ಶಿಕ್ಷಣವನ್ನು ಉತ್ತಮ ಪಡಿಸುವ ಯೋಜನೆಗಳು, ರಾಜ್ಯದ ಯುವಕರಿಗೆ ನೌಕರಿ ಇಂಥಹಾ ವಿಷಯಗಳ ಬಗ್ಗೆ ಮಾತನಾಡಿ ಎಂದು ಕುಟುಕಿದ್ದಾರೆ.
ಸಿನಿಮಾದವರು ದುಡ್ಡು ಮಾಡಿಬಿಡುತ್ತಿದ್ದಾರೆ ಎಂಬುವುದೇ ದೊಡ್ಡ ಚರ್ಚೆಯಾಗುತ್ತಿದೆ. ಇದು ಬಹಳ ದುರದೃಷ್ಟ. ಆದರೆ, ಇವರು ಚರ್ಚೆ ಮಾಡುತ್ತಿರುವುದನ್ನು ಕೇಳಿ ಇವರಿಗೆ ಬೇರೆ ಕೆಲಸವೇ ಇಲ್ಲವಾ ಎಂಬ ಪ್ರಶ್ನೆ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಸಿನಿಮಾ ಪಾಡಿಗೆ ಸಿನಿಮಾವನ್ನು ಬಿಟ್ಟುಬಿಡಿ. ನಿಮ್ಮ ಕೈಯಲ್ಲಿ ಸಾಧ್ಯವಾದರೆ ಬೆಂಬಲ ನೀಡಿ. ಇಲ್ಲವಾದರೆ ಬಿಡಿ. ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎಂಬ ಕಾರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡುತ್ತಿದ್ದೇವೆ. ಸಹಜವಾಗಿ ಲಾಭದ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನಾವು ಮಾಡುತ್ತಿರುವುದು ದೊಡ್ಡ ತಪ್ಪು ಎಂದು ದೇಶವ್ಯಾಪ್ತಿಯಾಗಿ ಬಿಂಬಿಸುವ ಪ್ರಯತ್ನ ಮಾಡಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.