ಪಹಲ್ಗಾಮ್ ರಣಮೇಧದ ಹಿಂದಿನ ಜಿಹಾದಿಗಳ ರಣಬೇಟೆ ಆರಂಭವಾಗಿದೆ. ಈಗಾಗಲೇ ಪ್ರಕರಣದ ತನಿಖೆಯನ್ನು ಎನ್ ಐಎಗೆ ವಹಿಸಲಾಗಿದ್ದು, ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದೆ.
ಈ ನಡುವೆ, ರಕ್ತಪಾತ ನಡೆಸಿದ ಆಗಂತುಕರ ಛಾಯಾಚಿತ್ರಗಳನ್ನು ತನಿಖಾ ತಂಡ ರಿಲೀಸ್ ಮಾಡಿದೆ. ಉಳಿದಂತೆ ಎನ್ ಐಎ ಅಧಿಕಾರಿಗಳು ಉಗ್ರರು ಅಡಗಿರುವ ಕೆಲ ಪ್ರದೇಶಗಳ ಮಾಹಿತಿ ಕಲೆ ಹಾಕಿದ್ದು, ಕೂಂಬಿಂಗ್ ಶುರು ಮಾಡಿದೆ. ಜಮ್ಮು-ಕಾಶ್ಮೀರ್ ಪೊಲೀಸ್ ತಂಡವೂ ತೀವ್ರ ತಲಾಶ್ ಮುಂದುವರಿಸಿದ್ದು, ಶೀಘ್ರವೇ ಎಲ್ಲರನ್ನೂ ಸದೆ ಬಡಿಯುವ ಸಂಕಲ್ಪ ಮಾಡಿದೆ.
ಗೃಹ ಸಚಿವ ಅಮಿತ್ ಶಾ ಸದ್ಯ ಕಾಶ್ಮೀರದಲ್ಲಿ ವಾಸ್ತವ್ಯ ಹೂಡಿದ್ದು, ತನಿಖೆಯ ಪ್ರತಿಯೊಂದು ಮಾಹಿತಿಯನ್ನು ಸೌದಿಯಿಂದ ಮರಳಿರುವ ಪ್ರಧಾನಿ ಜೊತೆ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.