ಬೆಂಗಳೂರು ಗ್ರಾಮಾಂತರ : ಗಜಶಿಲಾಪುರಿಗೆ ಕೊಟ್ಟ ಗಜಪಡೆ ಎಂಟದರಿ ಕೊಟ್ಟಿದೆ. ಬೆಂಗಳೂರು ಹೊರವಲಯದ ಆನೇಕಲ್ ಬಳಿ ಆಹಾರ ಅರಸಿ ಬನ್ನೇರುಘಟ್ಟ ಕಾಡಿನಿಂದ ನಾಡಿಗೆ ಬಂದಿರುವುದಾಗಿ ತಿಳಿದುಬಂದಿದೆ.
ಈ ಕಾಡಾನೆಗಳ ದೃಶ್ಯವು ಡ್ರೋನ್ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಕಳೆದ ಎರಡು ದಿನಗಳಿಂದ ಆನೇಕಲ್ ಸುತ್ತಮುತ್ತ ಕಾಡಾನೆಗಳ ರೌಂಡ್ಸ್ ಮಾಡುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬೆಳಗಾಗುತ್ತಿದ್ದಂತೆ ಕೆರೆ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಾಣಿ ಪ್ರಿಯ ಪ್ರದೀಪ್ ಅವರ ಡ್ರೋನ್ ಕ್ಯಾಮಾರಾದಲ್ಲಿ ಈ ದೃಶ್ಯ ಸೆರೆಯಗಿದೆ.
ಸದ್ಯ ಕಾಡಿಗಟ್ಟಲು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಕಾಡಾನೆಗಳು ಕಾಡಿನತ್ತ ಮುಖ ಮಾಡಿವೆ ಎನ್ನಲಾಗಿದೆ.
ಇದನ್ನೂ ಓದಿ : ಕೊಟ್ಟಿಗೆಗೆ ನುಗ್ಗಿ ಮೇಕೆಯನ್ನು ಹೊತ್ತೊಯ್ದ ಚಿರತೆ!



















