ಬೆಂಗಳೂರು: ಇ.ಡಿ (ED) ವಿಚಾರಣೆ ಎದುರಿಸಲು ನಾನು ಸೇರಿದಂತೆ ನಮ್ಮ ಇಡೀ ಕುಟುಂಬ ಸಿದ್ಧವಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ಐಶ್ವರ್ಯಾಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಂಸದ ಡಿಕೆ ಸುರೇಶ್ (DK Suresh) ವಿಚಾರಣೆ ಎದುರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಸುರೇಶ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ನಮ್ಮ ಕುಟುಂಬ ಇಡಿ ವಿಚಾರಣೆಗೆ ಯಾವಾಗಲೂ ಸಿದ್ಧ. ಇಡಿ ಕೇಸ್ ಆಯ್ತು, ಯಾರೂ ನಮ್ಮ ರಕ್ಷಣೆಗೆ ಬಂದಿಲ್ಲ. ಕೊನೆಗೆ ನ್ಯಾಯಾಲಯ ರಕ್ಷಣೆಗೆ ಬಂದಿದ್ದು. ಯಾರೋ ಹೇಳಿಕೆ ಕೊಟ್ಟಿದ್ದಾರೆಂದು ಕರೆದಿದ್ದಾರೆ. ಜನಪ್ರತಿನಿಧಿಗಳನ್ನ ಯಾರು ಬೇಕಿದ್ರು ಭೇಟಿ ಮಾಡಬಹುದು. ಅದನ್ನು ದೊಡ್ಡದಾಗಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ.