ಕೊಲೆ, ಸುಲಿಗೆ, ದರೋಡೆ ಮಾಡಿದ ಕ್ರಿಮಿನಲ್ ಗಳನ್ನು ಸುಮ್ಮನೆ ಬಿಡೋಕೆ ಆಗುತ್ತಾ? ಹಾವಿನ ಹುತ್ತದಲ್ಲಿ ಅಡಗಿದ್ದರೂ ಹೆಡೆಮುರಿ ಕಟ್ಟಿ ಕಂಬಿ ಹಿಂದೆ ತಳ್ಳಬೇಕಾಗುತ್ತೆ.. ಹಾಗಂತ ಕ್ರಿಮಿನಲ್ಗಳು ಸುಲಭವಾಗಿ ಸಿಗ್ತಾರಾ? ಇಲ್ಲ. ಯಾಕಂದರೆ ಅಪರಾಧ ಕೃತ್ಯದಲ್ಲಿ ಭಾಗಿಯಾದವರನ್ನು ಲಾಕ್ ಮಾಡುವುದು ಎಷ್ಟು ಕಷ್ಟ ಅನ್ನೋದು ಪೊಲೀಸರಿಗಷ್ಟೇ ಗೊತ್ತು. ಗುಜರಾತ್ನ ಅಹ್ಮದಾಬಾದ್ ಅಪರಾಧಿ ಹಿಡಿಯಲು ಪೊಲೀಸರು ಸಿಕ್ಕಾಪಟ್ಟೆ ಬೆವರು ಹರಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈತ ಅಭಿಷೇಕ್ ಅಲಿಯಾಸ್ ಶೂಟರ್. ಮೋಸ್ಟ್ ವಾಟೆಂಡ್ ಕ್ರಿಮಿನಲ್. ಮರ್ಡರ್. ರಾಬರಿ ಸೇರಿದಂತೆ ಹಲವಾರು ಪ್ರಕರಣಗಳು ಅವನ ಮೇಲಿದ್ದವು. ಪೊಲೀಸರಿಗೆ ಮಂಕುಬೂದಿ ಎರಚಿ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದ. ಹುಡುಕಾಟ ನಡೆಸಿದ್ದ ಪೊಲೀಸರು ಆತನ ಮನೆಯನ್ನು ಪತ್ತೆ ಹಚ್ಚಿದ್ದರು. ಖಚಿತ ಮಾಹಿತಿ ಆಧರಿಸಿ ಅಹ್ಮದಾಬಾದ್ನ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದರು. ಆಗ ಅಭಿಷೇಕ್ ನನ್ನು ಬಂಧಿಸಲು ಮುಂದಾಗಿದ್ದರು. ಆ ವೇಳೆ ಅಭಿಷೇಕ್ ಹೈಡ್ರಾಮಾವನ್ನೇ ಸೃಷ್ಟಿ ಮಾಡಿದ್ದಾನೆ. ಪ್ಲಾಟ್ನ ಮೇಲಿನಿಂದ ಬಿದ್ದು ಸಾಯೋದಾಗಿ ಪೊಲೀಸರನ್ನೇ ಹೆದರಿಸಿದ್ದಾನೆ. ಅಪಾರ್ಟ್ಮೆಂಟ್ನ ತುತ್ತ ತುದಿಯಲ್ಲಿ ನಿಂತು ಪೊಲೀಸರನ್ನೇ ದಂಗು ಬಡಿಸಿದ್ದಾನೆ.
ಸತತ ಮೂರು ಗಂಟೆ ಪೊಲೀಸರನ್ನ ಕಾಡಿಸಿದ ಆರೋಪಿ ಅಭಿಷೇಕ್, ನನಗೆ ಅನ್ಯಾಯ ಆಗುತ್ತಿದೆ ಅಂತ ಇನ್ಸ್ಟ್ರಾಗ್ರಾಂನಲ್ಲೂ ಲೈವ್ ಗೆ ಬಂದಿದ್ದಾನೆ. ಫೈನಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಮೂರು ಗಂಟೆ ಕಾರ್ಯಾಚರಣೆ ನಡೆಸಿದ ಹೇಗೋ ಮನವೊಲಿಸಿ ಕೆಳಗಿಸಿದ್ದಾರೆ. ಬಳಿಕ ಅರೆಸ್ಟ್ ಮಾಡಿ ಸ್ಟೇಷನ್ಗೆ ಕರೆದೊಯ್ದಿದ್ದಾರೆ. ಆರೋಪಿ ಅಭಿಷೇಕನ ಹೈಡ್ರಾಮಾ ನೋಡೋಕೆ ಜನ ಸಾಗರವೇ ನೆರೆದಿತ್ತು. ತಲೆ ಮರೆಸಿಕೊಂಡು ಕಳ್ಳ ಬೆಕ್ಕಿನಂತೆ ಓಡಾಡ್ತಿದ್ದ ಆರೋಪಿ ಅಭಿಷೇಕ್, ಕೆಲ ಹೊತ್ತು ಪೊಲೀಸರನ್ನೇ ಭಯ ಬೀಳಿಸಿದ್ದು ಸುಳ್ಳಲ್ಲ.