ಈಗಿನ ಕಾಲದಲ್ಲಿ ಮಾನವೀಯತೆ ಎಂಬುವುದು ಇಲ್ಲವೇ ಇಲ್ಲ ಎನ್ನುವಂತಾಗಿದೆ. ಅದೆಷ್ಟೋ ಬಾರಿ ಕೆಲವರು, ಅಪಾಯದಲ್ಲಿದ್ದರೂ ಕೂಡ ಕಂಡು ಕಾಣದಂತೆ ಹೋಗುತ್ತಾರೆ. ಇನ್ನೂ ಕೆಲವರು ಕರುಣೆ ತೋರಿ ಸಹಾಯಕ್ಕೆ ಮುಂದಾಗುತ್ತಾರೆ.
ಅದೇ ರೀತಿ ಇದೀಗ ಇಲ್ಲೊಂದು ಕಡೆ, ಒಬ್ಬ ಬಾಲಕ ಶಾಲೆಯಿಂದ ಹೋಗಬೇಕಾದರೆ ನೀರಿನಲ್ಲಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆಗ ಬೈಕ್ ನಲ್ಲಿ ಅದೇ ಮಾರ್ಗವಾಗಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೇ ಬಾಲಕನನ್ನು ರಕ್ಷಿಸಿದ್ದಾರೆ. ಈ ಘಟನೆಯು ಚೆನ್ನೈನ ಅರುಂಬಕ್ಕಂನಲ್ಲಿ ನಡೆದಿದ್ದು. ಈ ಘಟನೆಗೆ ಸಂಬಂಧಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.